ಭಾರತ-ಪಾಕಿಸ್ತಾನ ಯುದ್ಧವನ್ನು ತಪ್ಪಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿ ಹಾಗೂ ರಾಜತಾಂತ್ರಿಕ ಪರಿಹಾರ ಅಳವಡಿಸಿ : ಸಿಪಿಐಎಂಎಲ್ ಕೇಂದ್ರ ಸಮಿತಿ ಆಗ್ರಹ - Karavali Times ಭಾರತ-ಪಾಕಿಸ್ತಾನ ಯುದ್ಧವನ್ನು ತಪ್ಪಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿ ಹಾಗೂ ರಾಜತಾಂತ್ರಿಕ ಪರಿಹಾರ ಅಳವಡಿಸಿ : ಸಿಪಿಐಎಂಎಲ್ ಕೇಂದ್ರ ಸಮಿತಿ ಆಗ್ರಹ - Karavali Times

728x90

8 May 2025

ಭಾರತ-ಪಾಕಿಸ್ತಾನ ಯುದ್ಧವನ್ನು ತಪ್ಪಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿ ಹಾಗೂ ರಾಜತಾಂತ್ರಿಕ ಪರಿಹಾರ ಅಳವಡಿಸಿ : ಸಿಪಿಐಎಂಎಲ್ ಕೇಂದ್ರ ಸಮಿತಿ ಆಗ್ರಹ

ಬೆಂಗಳೂರು, ಮೇ 08, 2025 (ಕರಾವಳಿ ಟೈಮ್ಸ್) : ಮೇ 6ರ ಮಧ್ಯರಾತ್ರಿಯಲ್ಲಿ, ಭಾರತ ಸರಕಾರ ಮತ್ತು ಭಾರತೀಯ ಸಶಸ್ತ್ರ ಪಡೆ, ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ತಾಣಗಳನ್ನು ನಾಶಪಡಿಸಿದ್ದಾಗಿ ಘೋಷಿಸಿವೆ. ಈ ದಾಳಿ ನಿಖರವಾಗಿ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಉದ್ರೇಕಿಸದಂತೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಲಭ್ಯವಾಗಿದ್ದ ನಂಬಬಲ್ಲ ಗುಪ್ತಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆದಿದೆಯಂತೆ. ಆದರೆ, ಪಾಕಿಸ್ತಾನವು ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಹಲವಾರು ನಾಗರಿಕರು ಈ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ.

‘ಆಪರೇಷನ್ ಸಿಂಧೂರ್’ ನಂತರ ಗಡಿಯಾಚೆ ಗುಂಡು ದಾಳಿಗಳು ನಡೆಯುತ್ತಿವೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ, ಮತ್ತೊಂದು ಭಾರತ-ಪಾಕಿಸ್ತಾನ ಯುದ್ಧ ಸಂಭವಿಸುವ ಸಾಧ್ಯತೆಗಳು ಸ್ಪಷ್ಟವಾಗುತ್ತಿವೆ. ಎರಡು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ನಡುವೆ ಯುದ್ಧ ನಡೆಯದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಎಲ್ಲ ರೀತಿಯ ರಾಜಕೀಯ ಪರಿಹಾರಗಳ ಮೂಲಕ ಭಯೋತ್ಪಾದನೆಯನ್ನು ನಿಭಾಯಿಸಲು ಹಾಗೂ ಪರಿಸ್ಥಿತಿಯನ್ನು ಶಾಂತಗೊಳಿಸಲು ಕ್ರಮ ಕೈಗೊಳ್ಳಬೇಕು.

ದೇಶದಾದ್ಯಾಂತ 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಗರಿಕರಿಗೆ ತುರ್ತು ಪರಿಸ್ಥಿತಿಗಳಲ್ಲಿ ಸ್ವರಕ್ಷಣೆಗೆ/ ಮಾಕ್ ಡ್ರಿಲ್ ತಾಲೀಮುಗಳನ್ನು ನಡೆಸಲಾಗುತ್ತಿದೆ. ಈ ತರಬೇತಿ 1971ರ ಯುದ್ಧದ ಸಮಯದ ಮಾದರಿಯಲ್ಲಿಯೇ ಹಮ್ಮಿಕೊಳ್ಳಲಾಗಿದೆ. ಇದರಿಂದ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವಿದ್ದು, ದೇಶದೊಳಗೆ ದ್ವೇಷ ಹುಟ್ಟುಹಾಕಲು ಅಥವಾ ಅಂಧಭಕ್ತ ಯುದ್ಧಕೋರರನ್ನು ಪ್ರೇರೇಪಿಸಲು ಅಲ್ಲ.

‘ಆಪರೇಷನ್ ಸಿಂಧೂರ್’ ಎಂಬ ಹೆಸರನ್ನು ಪಹಲ್ಗಾಮ್‍ನ ಭಯೋತ್ಪಾದಕ ದಾಳಿಯಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ನ್ಯಾಯ ಒದಗಿಸುವ ಸಂಕೇತವಾಗಿ ಆಯ್ಕೆ ಮಾಡಲಾಗಿದೆ. ಈ ಕುಟುಂಬಗಳಿಗೆ ನ್ಯಾಯ ಸಿಗುವುದು ಅತ್ಯಂತ ಅವಶ್ಯಕ. ಜೊತೆಗೆ, ಅವರಿಂದಲೇ ಕೇಳಿಬರುತ್ತಿರುವ ಶಾಂತಿ ಮತ್ತು ಸೌಹಾರ್ದತೆಗಾಗಿ ಮನವಿ ಹಾಗೂ ಭಯೋತ್ಪಾದನೆ ಸಂಭವಿಸಲು ಕಾರಣವಾದ ವೈಫಲ್ಯಗಳನ್ನು ತಿದ್ದುವ ಅಗತ್ಯವಿದೆ. ಹಿಮಾಂಶಿ ನರ್ವಾಲ್ ಮತ್ತು ಶೈಲಾ ನೇಗಿ ಎಂಬ ಧೈರ್ಯವಂತ ಮಹಿಳೆಯರ ವಿರುದ್ಧ ನಡೆಯುತ್ತಿರುವ ದ್ವೇಷ ಮತ್ತು ಟ್ರೋಲ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

‘ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಬಳಿಕ ಇಂಟರ್ನೆಟ್‍ನಲ್ಲಿ ಸುಳ್ಳು ಸುದ್ದಿ ಮತ್ತು ವಿರುದ್ಧ ಹೇಳಿಕೆಗಳು ಹರಡುತ್ತಿವೆ.ಸುಳ್ಳು ಸುದ್ದಿ ಹರಡುವಿಕೆಯನ್ನು ತಡೆಗಟ್ಟುವುದು ಅಗತ್ಯವಾದರೂ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಮತ ವ್ಯಕ್ತಪಡಿಸುವ ಹಕ್ಕುಗಳನ್ನು ಕಡಿವಾಣ ಹಾಕಬಾರದು. ಭೋಜಪುರಿ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋರ್, ಲಕ್ನೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮತ್ತು ರಾಜಕೀಯ ವ್ಯಂಗ್ಯಕಾರ್ತಿ ಮಾದ್ರಿ ಕಾಕೋಟಿ, ಡಿಜಿಟಲ್ ನ್ಯೂಸ್ ಚಾನೆಲ್ 4ಪಿಎಂ ನೆಟ್ವರ್ಕ್ ವಿರುದ್ಧ ಮಾಡಲಾದ ಸುಳ್ಳು ಆರೋಪಗಳು ಹಾಗೂ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೈ ಅವರ ಯುಟ್ಯೂಬ್ ಚಾನೆಲ್ ಹಠಾತ್ ಕಾಣೆಯಾಗಿರುವುದು  ಜನರ ವಿರೋದವನ್ನು  ದೇಶದ್ರೋಹವೆಂದು ಬಣ್ಣಿಸುವ ಹೊಸ ಮತ್ತು ಆತಂಕಕಾರಿ ಹಂತವನ್ನು ತೋರಿಸುತ್ತಿದೆ.

ಭಾರತ ಸರ್ಕಾರವು ಇಂತಹ ದಮನಕಾರಿ ಕ್ರಮಗಳನ್ನು ನಿಲ್ಲಿಸಬೇಕು. ಎಲ್ಲಾ ನ್ಯಾಯಪ್ರಿಯ ಭಾರತೀಯರು ಭಯೋತ್ಪಾದನೆ, ದ್ವೇಷ ಮತ್ತು ದಮನದ ವಿರುದ್ಧ ಶಕ್ತಿಯಾಗಿ ಹೋರಾಡಬೇಕು. ಶಾಂತಿ, ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಎತ್ತಿಹಿಡಿಯಬೇಕು. ಪಾಕಿಸ್ತಾನ ಸರ್ಕಾರದತ್ತ ನಮ್ಮ ಮನವಿಯೆಂದರೆ ತಮ್ಮ ದೇಶದಲ್ಲಿರುವ ಭಯೋತ್ಪಾದಕ ತಾಣಗಳನ್ನು ನಿಯಂತ್ರಿಸಬೇಕು. ಪಾಕಿಸ್ತಾನದ ಜನರೂ ಕೂಡ ಭಯೋತ್ಪಾದನೆ ಮತ್ತು ಯುದ್ಧದ ವಿರುದ್ಧ ಧ್ವನಿ ಎತ್ತಬೇಕು. ಭಾರತ-ಪಾಕಿಸ್ತಾನ ಗಡಿಯಾಚೆ ನಾವೆಲ್ಲರೂ ಒಟ್ಟಾಗಿ ಯುದ್ಧವನ್ನು ತಿರಸ್ಕರಿಸೋಣ ಮತ್ತು ಶಾಂತಿ ಸ್ಥಾಪನೆಗಾಗಿ ದ್ವಿಪಕ್ಷೀಯ ಮಾತುಕತೆ ಆರಂಭಿಸುವಂತೆ ಒತ್ತಾಯಿಸೋಣ ಎಂದು ಸಿಪಿಐಎಂಎಲ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಭಾರತ-ಪಾಕಿಸ್ತಾನ ಯುದ್ಧವನ್ನು ತಪ್ಪಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿ ಹಾಗೂ ರಾಜತಾಂತ್ರಿಕ ಪರಿಹಾರ ಅಳವಡಿಸಿ : ಸಿಪಿಐಎಂಎಲ್ ಕೇಂದ್ರ ಸಮಿತಿ ಆಗ್ರಹ Rating: 5 Reviewed By: karavali Times
Scroll to Top