ಮೈಸೂರು : ಜೂನ್ 22 ರಂದು ಹಝ್ರತ್ ಅನ್ವರ್ ಅಲಿ ಶಾ ಚಿಶ್ತಿ ಅವರ 22ನೇ ಸಂದಲ್ ಕಾರ್ಯಕ್ರಮ - Karavali Times ಮೈಸೂರು : ಜೂನ್ 22 ರಂದು ಹಝ್ರತ್ ಅನ್ವರ್ ಅಲಿ ಶಾ ಚಿಶ್ತಿ ಅವರ 22ನೇ ಸಂದಲ್ ಕಾರ್ಯಕ್ರಮ - Karavali Times

728x90

19 June 2025

ಮೈಸೂರು : ಜೂನ್ 22 ರಂದು ಹಝ್ರತ್ ಅನ್ವರ್ ಅಲಿ ಶಾ ಚಿಶ್ತಿ ಅವರ 22ನೇ ಸಂದಲ್ ಕಾರ್ಯಕ್ರಮ

ಮೈಸೂರು-ಶ್ರೀರಂಗಪಟ್ಟಣದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಖ್ವಾಜಾ ಅನ್ವರ್ ಅಲಿ ಶಾ ಚಿಶ್ತಿ (ಖ.ಸಿ.) ಅವರ ದರ್ಗಾ
ಅತಾಯೇ ರಸೂಲ್ ಮೂವ್‍ಮೆಂಟ್ ಮೈಸೂರು ಇದರ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮೈಸೂರು

ಮೈಸೂರು, ಜೂನ್ 19, 2022 (ಕರಾವಳಿ ಟೈಮ್ಸ್) : ಮೈಸೂರು-ಶ್ರೀರಂಗಪಟ್ಟಣದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಖ್ವಾಜಾ ಅನ್ವರ್ ಅಲಿ ಶಾ ಚಿಶ್ತಿ (ಖ.ಸಿ.) ಅವರ 22ನೇ ಸಂದಲ್ ಕಾರ್ಯಕ್ರಮವು ಜೂನ್ 22 ರಂದು ಭಾನುವಾರ ನಡೆಯಲಿದೆ. 

ಶ್ರೀರಂಗಪಟ್ಟಣದ ಗಂಜಾಂನಲ್ಲಿ ಅಸರ್ ನಮಾಝ್ ಬಳಿಕ ಸಂದಲ್ ಕಾರ್ಯಕ್ರಮದ ನಡೆಯಲಿದ್ದು, ಅತಾಯೇ ರಸೂಲ್ ಮೂವ್‍ಮೆಂಟ್ ಮೈಸೂರು ಇದರ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮೈಸೂರು ಅವರು ನೇತೃತ್ವ ವಹಿಸಲಿದ್ದಾರೆ. 

ಸರ್‍ಗುರು ಹಝ್ರತ್ ಖ್ವಾಜಾ ಬಲ್ಹರ್ ಅಲಿ ಶಾ ಚಿಶ್ತಿ ದುವಾಶಿರ್ವಚನಗೈಯುವರು. ಸಯ್ಯದ್ ಅಜಾಝ್ ಮಸ್ತಾನ್ ಶಾ ಖಾದ್ರಿ, ಸಯ್ಯದ್ ಗೌಸ್ ಪೀರ್ ಶಾ ಖಾದ್ರಿ, ಸಯ್ಯದ್ ನವೀದ್ ಶಾ ಖಾದ್ರಿ, ಮುಹಮ್ಮದ್ ರೂಹುಲ್ಲಾ ಶಾ ಶಿತಾರಿ ಖಾದ್ರಿ, ಮುಹಮ್ಮದ್ ನಸ್ರುಲ್ಲಾ ಶಾ ಖಾದ್ರಿ, ಮುನವ್ವರ್ ವಲಿಯುಲ್ಲಾ ಶಾ ಖಾದ್ರಿ ವಲ್ ಚಿಶ್ತಿ, ಅಹ್ಮದುಲ್ಲಾ ಶಾ ಖಾದ್ರಿ  ಉಲ್ ಚಿಶ್ತಿ, ಅಲೀಂ ಶಾ ಖಾದ್ರಿ, ಜಮಾಲುದ್ದೀನ್ ಶಾ ಖಾದ್ರಿ, ಖಲೀಲ್ ಶಾ ಖಾದ್ರಿ, ಹಕೀಂ ರೋಶನ್ ಶಾ ಖಾದ್ರಿ, ಅಝೀಝುಲ್ಲಾ ಶಾ ಚಿಶ್ತಿ, ಖ್ವಾಜಾ ಅತಾ ಅಲಿ ಶಾ ಚಿಶ್ತಿ ಸಹಿತ ವಿವಿಧ ಸೂಫಿ ಹಾಗೂ ಶರಣ ಸಂತರು, ಧಾರ್ಮಿಕ, ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನದಾನ ನಡೆಯಲಿದೆ ಎಂದು ಮೂವ್ ಮೆಂಟ್ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮೈಸೂರು : ಜೂನ್ 22 ರಂದು ಹಝ್ರತ್ ಅನ್ವರ್ ಅಲಿ ಶಾ ಚಿಶ್ತಿ ಅವರ 22ನೇ ಸಂದಲ್ ಕಾರ್ಯಕ್ರಮ Rating: 5 Reviewed By: karavali Times
Scroll to Top