ಹತ್ಯೆಗೀಡಾದ ಕೊಳತ್ತಮಜಲು ರಹೀಂ ಹಾಗೂ ಹಲ್ಲೆಗೊಳಗಾದ ಶಾಫಿ ಮನೆಗೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನಿಯೋಗ ಭೇಟಿ - Karavali Times ಹತ್ಯೆಗೀಡಾದ ಕೊಳತ್ತಮಜಲು ರಹೀಂ ಹಾಗೂ ಹಲ್ಲೆಗೊಳಗಾದ ಶಾಫಿ ಮನೆಗೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನಿಯೋಗ ಭೇಟಿ - Karavali Times

728x90

1 June 2025

ಹತ್ಯೆಗೀಡಾದ ಕೊಳತ್ತಮಜಲು ರಹೀಂ ಹಾಗೂ ಹಲ್ಲೆಗೊಳಗಾದ ಶಾಫಿ ಮನೆಗೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನಿಯೋಗ ಭೇಟಿ

 ಬಂಟ್ವಾಳ, ಜೂನ್ 01, 2025 (ಕರಾವಳಿ ಟೈಮ್ಸ್) : ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ (ಕಾಂಬೋಡಿ) ಎಂಬಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಬೆಳ್ಳೂರು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ ಹಾಗೂ ಹಲ್ಲೆಗೊಳಗಾದ ಖಲಂದರ್ ಶಾಫಿ ಅವರ ಮನೆಗಳಿಗೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನಿಯೋಗ ಶನಿವಾರ ಬೇಟಿ ನೀಡಿತು.

ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡಿದ ನಿಯೋಗವು ನಿಮ್ಮ ನೋವಿನಲ್ಲಿ ನಾವು ಕೂಡಾ ಭಾಗಿಗಳು, ನಾವು ನಿಮ್ಮ ಜೊತೆಗೆ ಸದಾ ಇದ್ದೇವೆ ಎಂದು ಧೈರ್ಯ ತುಂಬಿದರು.

ನಿಯೋಗದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್, ಉಪಾಧ್ಯಕ್ಷ ಎಂ ಎಸ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ವಿಟ್ಲ, ಕೋಶಾಧಿಕಾರಿ ಹಾಜಿ ಪಿ ಎಸ್ ಅಬ್ದುಲ್ ಹಮೀದ್ ನೆಹರುನಗರ, ಪ್ರಮುಖರಾದ ಬಶೀರ್ ಫರಂಗಿಪೇಟೆ, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಹಂಝ ಬಸ್ತಿಕೋಡಿ, ಹಾಜಿ ಬಿ ಎ ಮುಹಮ್ಮದ್ ಬಂಟ್ವಾಳ, ಹಕೀಂ ಕಲಾಯಿ, ಬಿ ಎಂ ತುಂಬೆ, ಮಜೀದ್ ಕನ್ಯಾನ, ಇಬ್ರಾಹಿಂ ನವಾಝ್ ಬಡಕಬೈಲು ಮೊದಲಾದವರು ಇದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಹತ್ಯೆಗೀಡಾದ ಕೊಳತ್ತಮಜಲು ರಹೀಂ ಹಾಗೂ ಹಲ್ಲೆಗೊಳಗಾದ ಶಾಫಿ ಮನೆಗೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನಿಯೋಗ ಭೇಟಿ Rating: 5 Reviewed By: karavali Times
Scroll to Top