ಇನ್ಸ್ಟಾಗ್ರಾಮಿನಲ್ಲಿ ಹಾಕಿದ್ದ ಫೋಟೋ ದುರುಪಯೋಪಡಿಸಿ ಕೋಮುಪ್ರಚೋದಕ ಪೋಸ್ಟ್ ಹಂಚಿದ ಕಿಡಿಗೇಡಿಗಳು : ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು - Karavali Times ಇನ್ಸ್ಟಾಗ್ರಾಮಿನಲ್ಲಿ ಹಾಕಿದ್ದ ಫೋಟೋ ದುರುಪಯೋಪಡಿಸಿ ಕೋಮುಪ್ರಚೋದಕ ಪೋಸ್ಟ್ ಹಂಚಿದ ಕಿಡಿಗೇಡಿಗಳು : ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು - Karavali Times

728x90

1 June 2025

ಇನ್ಸ್ಟಾಗ್ರಾಮಿನಲ್ಲಿ ಹಾಕಿದ್ದ ಫೋಟೋ ದುರುಪಯೋಪಡಿಸಿ ಕೋಮುಪ್ರಚೋದಕ ಪೋಸ್ಟ್ ಹಂಚಿದ ಕಿಡಿಗೇಡಿಗಳು : ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ, ಜೂನ್ 01, 2025 (ಕರಾವಳಿ ಟೈಮ್ಸ್) : ಇನ್ಸ್ಟಾಗ್ರಾಮಿನಲ್ಲಿ ಹಾಕಿದ್ದ ಫೋಟೋವನ್ನು ದುರುಪಯೋಗಪಡಿಸಿಕೊಂಡ ಕಿಡಿಗೇಡಿಗಳು ಇತ್ತೀಚೆಗೆ ನಡೆದ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ದ್ವೇಷ ಉಂಟು ಮಾಡುವ ಸಂದೇಶ ಪ್ರಸಾರ ಮಾಡಿದ ಬಗ್ಗೆ ವ್ಯಕ್ತಿಯೋರ್ವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. 

ಈ ಬಗ್ಗೆ ಅಮ್ಟಾಡಿ ಗ್ರಾಮದ ಲೊರೆಟ್ಟೊಪದವು ನಿವಾಸಿ ಪ್ರಜ್ವಲ್ ಶೆಟ್ಟಿ (29) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಇನ್ಸ್ಟಾಗ್ರಾಮಿನಲ್ಲಿ ಹಾಕಿದ್ದ ಫೆÇೀಟೋವನ್ನು ಯಾರೋ ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಂಡು, ಇತ್ತೀಚೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ, ಕೋಮುದ್ವೇಷವನ್ನು ಉಂಟು ಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದಾಗಿ  ತಾನು ಜೀವ ಭಯಕ್ಕೊಳಗಾಗಿರುತ್ತೇನ ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಇನ್ಸ್ಟಾಗ್ರಾಮಿನಲ್ಲಿ ಹಾಕಿದ್ದ ಫೋಟೋ ದುರುಪಯೋಪಡಿಸಿ ಕೋಮುಪ್ರಚೋದಕ ಪೋಸ್ಟ್ ಹಂಚಿದ ಕಿಡಿಗೇಡಿಗಳು : ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು Rating: 5 Reviewed By: karavali Times
Scroll to Top