ಮಂಗಳೂರು, ಜೂನ್ 21, 2025 (ಕರಾವಳಿ ಟೈಮ್ಸ್) : ಅಸಂಘಟಿತ ಕಾರ್ಮಿಕರ ಸಮಗ್ರ ಕಲ್ಯಾಣಕ್ಕಾಗಿ ದೇಶದಲ್ಲಿ ವಿನೂತನ ಕಾರ್ಯಕ್ರಮ ಜಾರಿಗೆ ತರಲು ಕರ್ನಾಟಕದ ಕಾಂಗ್ರೆಸ್ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೊದಲು ಇದ್ದ ಹಲವಾರು ಯೋಜನೆಗಳನ್ನು ಜನರಿಗೆ ಮುಟ್ಟಿಸುವುದು ನಮ್ಮ ಮುಖ್ಯ ಗುರಿಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ನಾಟೆÀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಅವರು ಅಸಂಘಟಿತ ಬ್ಲಾಕ್ ಅಧ್ಯಕ್ಷರು ಮತ್ತು ಅಸಂಘಟಿತ ಜಿಲ್ಲಾ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಇತ್ತೀಚೆಗೆ ನಿಧನರಾದ ಪಕ್ಷದ ಯುವ ನಾಯಕರಾದ ಓಂಶ್ರೀ ಪೂಜಾರಿ ಹಾಗೂ ಅಮನ್ ರಾವ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಾಹಿತಿ ನೀಡಿದರು
ಜಿಲ್ಲಾ ಅಸಂಘಟಿತ ಮತ್ತು ಬ್ಲಾಕ್ ಅಸಂಘಟಿತ ಪದಾಧಿಕಾರಿಗಳಾದ ಜೆಸಿಂತಾ ಮೆಂಡೋನ್ಸ, ದಿನೇಶ್ ಶೆಟ್ಟಿ, ಬಾವಾಜಿ, ಮಹಮ್ಮದ್ ಅಶ್ರಫ್, ನಿಯಾಝ್ ಫಜೀರ್, ಶಿವಪ್ರಕಾಶ್, ನಾರಾಯಣ ಪೂಜಾರಿ, ಅಬ್ದುಲ್ ರಝಾಕ್, ರವಿರಾಜ್ ಆಳ್ವ, ಸಂದೀಪ್ ಮ್ಯಾಕ್ಸಿಮ್, ಆದೇಶ್ ಪಂಡಿತ್, ದಯಾನಂದ ಗೌಡ, ಪ್ರಶಾಂತ್ ಅಮೀನ್, ರಿಚರ್ಡ್ ಮೆನೇಜಸ್, ಪ್ರಶಾಂತ್, ವಿವೇಕ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಯೋಗೀಶ್ ಸ್ವಾಗತಿಸಿ, ನಿರಂಜನ್ ರೈ ಕೆ ವಂದಿಸಿದರು.
0 comments:
Post a Comment