ಪಾಂಡವರಕಲ್ಲು : ಹಾವು ಕಡಿದು ವಿವಾಹಿತ ವ್ಯಕ್ತಿ ದಾರುಣ ಮೃತ್ಯು - Karavali Times ಪಾಂಡವರಕಲ್ಲು : ಹಾವು ಕಡಿದು ವಿವಾಹಿತ ವ್ಯಕ್ತಿ ದಾರುಣ ಮೃತ್ಯು - Karavali Times

728x90

4 June 2025

ಪಾಂಡವರಕಲ್ಲು : ಹಾವು ಕಡಿದು ವಿವಾಹಿತ ವ್ಯಕ್ತಿ ದಾರುಣ ಮೃತ್ಯು

 ಬಂಟ್ವಾಳ, ಜೂನ್ 05, 2025 (ಕರಾವಳಿ ಟೈಮ್ಸ್) : ಹಾವು ಕುಡಿದು ವಿವಾಹಿತನೋರ್ವ ಮೃತಪಟ್ಟ ಘಟನೆ ತಾಲೂಕಿನ ಪಾಂಡವರಕಲ್ಲು ಎಂಬಲ್ಲಿ ಮಂಗಳವಾರ ಸಂಜೆ ವೇಳೆ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಸ್ಥಳೀಯ £ವಾಸಿ, ಅಶ್ರಫ್ ಪಾದೆ (29) ಎಂದು ಹೆಸರಿಸಲಾಗಿದೆ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ವೇಳೆ ಗೋಣಿ ಚೀಲದ ಬದಿಯಲ್ಲಿದ್ದ ನಾಗರಹಾವು ಕಚ್ಚಿದ್ದು, ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಎಸ್ಕೆಎಸ್ಸೆಸ್ಸೆಫ್ ಪಾಂಡವರಕಲ್ಲು ಶಾಖಾ ಸಕ್ರಿಯ ಸದಸ್ಯರಾಗಿರುವ ಇವರು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಅವರ ತಂದೆಯವರೂ ನಿಧನರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಂಡವರಕಲ್ಲು : ಹಾವು ಕಡಿದು ವಿವಾಹಿತ ವ್ಯಕ್ತಿ ದಾರುಣ ಮೃತ್ಯು Rating: 5 Reviewed By: karavali Times
Scroll to Top