ಬಂಟ್ವಾಳ, ಜೂನ್ 15, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಶನಿವಾರದಿಂದ ಮತ್ತೆ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮನೆ ಸೊತ್ತುಗಳಿಗೆ ಹಾನಿ ಸಂಭವಿಸಿದ ಘಟನೆಗಳು ವರದಿಯಾಗಿದೆ.
ಕಾವಳಪಡೂರು ಗ್ರಾಮದ ಆಲಂಪುರಿ ನಿವಾಸಿ ರೇವತಿ ಕೋಂ ರಾಮ ಗಾಣಿಗ ಅವರ ಮನೆಯ ಮುಂಭಾಗದಲ್ಲಿ ಆವರಣ ಗೋಡೆ ಕುಸಿದಿರುತ್ತದೆ. ಕಾಡಬೆಟ್ಟು ಗ್ರಾಮದ ಮೇಗಿನಮನೆ ನಿವಾಸಿ ರಿಚರ್ಡ್ ಡಿಸೋಜ ಅವರ ಪಕ್ಕಾ ಮನೆಗೆ ಅಡಿಕೆ ಮರ ಬಿದ್ದು ಹಾನಿ ಸಂಭವಿಸಿದೆ. ಕರಿಯಂಗಳ ಗ್ರಾಮದ ನಿವಾಸಿ ಶಾಂತ ಎಂಬವರ ಮನೆಯ ತಡೆಗೋಡೆ ಕುಸಿದಿರುತ್ತದೆ. ಕಾವಳಪಡೂರು ಗ್ರಾಮದ ಆಲಂಪುರಿ ನಿವಾಸಿ ರೇವತಿ ರಮೇಶ್ ಗಾಣಿಗ ಅವರ ಮನೆಯ ಮುಂಭಾಗದ ಬಾವಿ ಹಾಗೂ ಆವರಣ ಗೋಡೆ ಕುಸಿದಿದ್ದು, ಸದ್ರಿ ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಅಮ್ಟಾಡಿ ಗ್ರಾಮದ ಬಾಂಬಿಲ ಎಂಬಲ್ಲಿ ಬಾಂಬಿಲ ಹಾಗೂ ತಲೆಂಬಿಲ ಸಂಪರ್ಕಿಸುವ ಗ್ರಾಮ ಪಂಚಾಯತ್ ರಸ್ತೆಗೆ ಗುಡ್ಡ ಕುಸಿದಿರುತ್ತದೆ. ಕರಿಯಂಗಳ ಗ್ರಾಮದ ಪುಂಚಮೆ ನಿವಾಸಿ ಸರೋಜಿನಿ ಅವರ ದನದ ಹಟ್ಟಿಗೆ ಗುಡ್ಡೆ ಜರಿದು ಹಟ್ಟಿ ಸಂಪೂರ್ಣ ಜರಿದು ಬಿದ್ದಿದ್ದು, ಸುಮಾರು 10 ದನಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಅರಳ ಗ್ರಾಮದ ಪಂಬದಗದ್ದೆ ನಿವಾಸಿ ದಿನಕರ ಪಿ ಬಿನ್ ರಾಮ ಶೆಟ್ಟಿಗಾರ್ ಅವರ ವಾಸದ ಮನೆಯ ಮೇಲೆ ಮಣ್ಣು ಬಿದ್ದು ಮನೆಯ ಗೋಡೆಗೆ ಹಾನಿಯಾಗಿದೆ. ಮನೆ ಮಂದಿ ಪಕ್ಕದ ಮನೆಗೆ ಸ್ಥಳಾಂತರಗೊಂಡಿರುತ್ತಾರೆ.
0 comments:
Post a Comment