ಬಂಟ್ವಾಳ, ಜೂನ್ 19, 2025 (ಕರಾವಳಿ ಟೈಮ್ಸ್) : ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ “ಶೈಕ್ಷಣಿಕ ಸಂಭ್ರಮ-2025” ಎಂಬ ವಿದ್ಯಾರ್ಥಿ ಪ್ರೇರಕ ಕಾರ್ಯಕ್ರಮವು ಬಿ ಸಿ ರೋಡಿನ ಸ್ಪರ್ಶ ಕಲಾಮಂದಿರಲ್ಲಿ ಜೂನ್ 22 ರಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಮುನ್ನೂರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದ ಅವರು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉದ್ಯಮಿ ಬಿ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭುವನೇಶ್ ಪಚ್ಚಿನಡ್ಕ, ಬಾಲಾಜಿಬೈಲು ಚಂದ್ರಹಾಸ ರೈ, ಪಿ ಜಯರಾಮ ರೈ ವಿಟ್ಲ, ಸುದರ್ಶನ್ ಜೈನ್ ಪಂಜಿಕಲ್ಲು, ಸರಪಾಡಿ ಅಶೋಕ ಶೆಟ್ಟಿ, ಬಿ ವಿಶ್ವನಾಥ, ಅನಿಲ್ ಪಂಡಿತ್, ರಾಜೇಶ್ ಮೆಂಡನ್, ಗಣೇಶ್ ಕೊಲ್ಯ, ಮಂಜುನಾಥ್, ಪುಷ್ಪಾವತಿ, ರಾಜೇಶ್ ಬೋಳಂತೂರು, ಪ್ರೆಸಿಲ್ಲಾ ಎವ್ಲಿನ್ ಡಿಸೋಜ, ರಾಮಕೃಷ್ಣ ರಾವ್, ರಾಜಾ ಚಂಡ್ತಿಮಾರ್, ವಿಜಯಕುಮಾರ್ ಕೊಟ್ಟಾರಿ ಅಡ್ಯಾರು ಭಾಗವಹಿಸಲಿದ್ದಾರೆ ಎಂದರು.
ಇದೇ ವೇಳೆ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಾದ ಪ್ರಾರ್ಥನಾ, ಅಝ್ಕಾ ಖತೀಜ ಕುನ್ನಿಲ್, ತನ್ವಿ ಹಾಗೂ ಶ್ರೀಶೈಲ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಬೋಳಂತೂರು ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ, ಮೋಕೆದ ಕಲಾವಿದೆರ್ ಅಭಿನಯದಲ್ಲಿ “ತೆಲಿಪುವರಾ ಅತ್ತ್ ಬುಲಿಪುವರಾ” ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದ ಕೊಟ್ಟಾರಿ, ಚಿಣ್ಣರ ಲೋಕ ಸೇವಾ ಟ್ರಸ್ಟ್ ವತಿಯಿಂದ ಕಳೆದ 4 ವರ್ಷಗಳಿಂದ ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡು ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪುಸ್ತಕ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದರು.
ಈ ಸಂದರ್ಭ ಚಿಣ್ಣರಲೋಕ ಆಡಳಿತ ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ, ಉಪಾಧ್ಯಕ್ಷ ಇಬ್ರಾಹಿಂ ಕೈಲಾರ್, ನಿರ್ದೇಶಕಿ ಶೋಭಾ ಶೆಟ್ಟಿ, ಶಾಲಾ ದತ್ತು ಸಂಚಾಲಕ ರಾಮಕೃಷ್ಣ ರಾವ್ ಜೊತೆಗಿದ್ದರು.
0 comments:
Post a Comment