ಸ್ಪೀಕರ್ ಹಾಗೂ ಮುಖ್ಯಮಂತ್ರಿ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಸಂದೇಶ : ವಾಟ್ಸಪ್ ಗ್ರೂಪ್ ವಿರುದ್ದ ಎಫ್.ಐ.ಆರ್. ದಾಖಲು - Karavali Times ಸ್ಪೀಕರ್ ಹಾಗೂ ಮುಖ್ಯಮಂತ್ರಿ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಸಂದೇಶ : ವಾಟ್ಸಪ್ ಗ್ರೂಪ್ ವಿರುದ್ದ ಎಫ್.ಐ.ಆರ್. ದಾಖಲು - Karavali Times

728x90

7 June 2025

ಸ್ಪೀಕರ್ ಹಾಗೂ ಮುಖ್ಯಮಂತ್ರಿ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಸಂದೇಶ : ವಾಟ್ಸಪ್ ಗ್ರೂಪ್ ವಿರುದ್ದ ಎಫ್.ಐ.ಆರ್. ದಾಖಲು

ಮಂಗಳೂರು, ಜೂನ್ 07, 2025 (ಕರಾವಳಿ ಟೈಮ್ಸ್) : ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋಗಳನ್ನು ಎಡಿಟ್ ಮಾಡಿ ವಾಟ್ಸಪ್ ಗ್ರೂಪಿನಲ್ಲಿ ಹಾಡು ಹಾಗೂ ಬರಹ ರೂಪದಲ್ಲಿ ಅವಹೇಳನ ಮಾಡಿದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಠಾಣಾ ಸಿಬ್ಬಂದಿ ಸುನಿಲ್ ಕುಮಾರ್ ಎನ್ ಅವರು ಫಿರ್ಯಾದಿ ಸಲ್ಲಿಸಿದ್ದಾರೆ. ಇವರು ಮಂಗಳೂರು ಪೆÇಲೀಸ್ ಕಮಿಷನರ್ ಅವರ ಆದೇಶದಂತೆ ಸಾಮಾಜಿಕ ಜಾಲ ತಾಣಗಳನ್ನು ನಿರ್ವಹಣೆ ಮಾಡುತ್ತಿರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರುವಂತಹ ಪೆÇೀಸ್ಟ್ ಗಳ ಬಗ್ಗೆ ನಿಗಾ ವಹಿಸುವ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಜೂನ್ 6 ರಂದು ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭ ಸಂಜೆ ಸುಮಾರು 4.30 ಗಂಟೆಗೆ ವಾಟ್ಸಾಪ್ ನಲ್ಲಿ “ಪಿರ್ಸ ಎಪೆÇ್ಪಲುಂ ಇಕ್ಕಟ್ಟ್’’ ಎಂಬ ಹೆಸರಿನ ವಾಟ್ಸಾಪ್ ಗ್ರೂಪಿನಲ್ಲಿ ಅಶ್ರಫ್ ಕಿನಾರ ಕುದ್ರೋಳಿ ಎಂಬ ಹೆಸರಿನ ವ್ಯಕ್ತಿಯು ``ಬ್ರೇಕಿಂಗ್? ಇದೀಗ ಸಜಿಪ ಪಾವೂರ್ ನಲ್ಲಿ ಮತ್ತೆ ಪೆÇಲೀಸ್ ರೈಡ್? ಅಲ್ಲಾಹನ ಸಮರ್ಪಣೆಗೆ ತಂದಿಟ್ಟ ಉಲ್ಹಿಯಾ ಕೊಡುವ ಹಸುಗಳನ್ನು ವಶಪಡಿಸುತ್ತಿರುವ ಪೆÇಲೀಸರು ಕೇಳಿದ್ರೆ ಸರಕಾರದ ಆದೇಶದಂತೆ?, ಮುಸ್ಲಿಮರ ಮತಗಳಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಮುಸ್ಲಿಮರು ಒಟ್ಟಾಗಿ ಬಿಸಿ ಮುಟ್ಟಿಸಬೇಕು’’ ಎಂಬುವುದಾಗಿ  ಬರೆದು  ಹರಿಬಿಟ್ಟಿದ್ದರು. 

ಅದೇ ರೀತಿ ವಾಟ್ಸಾಪ್ ನಲ್ಲಿ ಇನ್ನೊಂದು ವೀಡಿಯೋ ಕ್ಲಿಪ್ಪಿಂಗ್ ಬಂದಿದ್ದು, ತೆರೆದು ನೋಡಲಾಗಿ ಒಟ್ಟು 57 ಸೆಕೆಂಡ್ ಗಳ ವೀಡಿಯೋ ಆಗಿದ್ದು, ಇದರಲ್ಲಿ ``ನಾನು ಸಾವರ್ಕರ್ ಅಭಿಮಾನಿ ಖಾದರ್‍ಕರ್, ಅಲಕ್ಕ ಪೆÇೀಯಿತಲ್ಲೇ..’’ ಎಂಬುವುದಾಗಿ ಬರೆದು ಮಾನ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರ ಫೆÇೀಟೋಗಳನ್ನು ಎಡಿಟ್ ಮಾಡಿರುವ ಮತ್ತು ಕೆಳಗಡೆ ಸಿಂಗರ್ ದಸ್ತಕೀರ್, ಲಿರಿಕ್ಸ್ ಸರಫ್ ವಿಟ್ಲ ಎಂಬುವುದಾಗಿ ಬರೆದು ಒಬ್ಬಾತ ವ್ಯಕ್ತಿಯು ಕೈಯಲ್ಲಿ ಮೊಬೈಲ್ ಫೆÇೀನನ್ನು ಹಿಡಿದುಕೊಂಡು, ಹೆಡ್ ಫೆÇೀನ್ ಹಾಕಿಕೊಂಡು ಬ್ಯಾರಿ ಭಾಷೆಯಲ್ಲಿ ``ಬಿಜೆಪಿ ಬರುತ್ತದೆ ಎಂದು ಹೆದರಿಸಿದರು, ಕೇಳಿದರು ಕೈ ತೋರಿಸಿ, ಕಾಂಗ್ರೆಸ್ ಕಾಂಗ್ರೆಸ್ ಎಂದು ಹೇಳುತ್ತೀರಲ್ಲ, ಎಲ್ಲಿ ಉಂಟು ಕಾಂಗ್ರೆಸ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು, ಬ್ಯಾರಿಗಳಿಗೆ ಆದ ಅನ್ಯಾಯವನ್ನು, ಕೇಳಲು ಕಾಂಗ್ರೆಸ್ ಪಕ್ಷ ಇಲ್ಲ, ಅಧಿಕಾರದಲ್ಲಿ ಇದ್ದು ಕೂಡ, ಸಂಘಿಯ ಬಂಧನ ಆಗಿಲ್ಲ, ಬಂಧನ ಮಾಡಲು ಧಮ್ ಇಲ್ಲ, ಯಾಕೆ ಬೇಕು ಅಧಿಕಾರ ನಿಮಗೆ, ನಾಚಿಕೆ ಆಗಲ್ವಾ,  ಬಿಟ್ಟು ಹೋಗಿ ಆಗದಿದ್ದರೆ ಬಿಟ್ಟುಹೋಗಿ, ಅಧಿಕಾರ ಬ್ಯಾರಿಗಳಿಗೆ ಬಿಟ್ಟು ಕೊಡಿ, ಬಿಟ್ಟು ಹೋಗಿ ಆಗದಿದ್ದರೆ ಬಿಟ್ಟುಹೋಗಿ, ಅಧಿಕಾರ ಬ್ಯಾರಿಗಳಿಗೆ ಬಿಟ್ಟು ಕೊಡಿ’’ ಎಂಬುದಾಗಿ ಬ್ಯಾರಿ ಭಾಷೆಯಲ್ಲಿ ಹಾಡು ಹಾಡಿರುವ ವೀಡಿಯೋ ಕಂಡು ಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಸ್ಪೀಕರ್ ಹಾಗೂ ಮುಖ್ಯಮಂತ್ರಿ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಸಂದೇಶ : ವಾಟ್ಸಪ್ ಗ್ರೂಪ್ ವಿರುದ್ದ ಎಫ್.ಐ.ಆರ್. ದಾಖಲು Rating: 5 Reviewed By: karavali Times
Scroll to Top