ಮಂಗಳೂರು, ಜೂನ್ 21, 2025 (ಕರಾವಳಿ ಟೈಮ್ಸ್) : ಮಂಗಳೂರು ಎಸ್ ಸಿ ಎಸ್ ಆಸ್ಪತ್ರೆ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಯುವ ಪೀಳಿಗೆಯು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ತಮ್ಮ ಜೀವನ ಶೈಲಿಯನ್ನು ಯೋಗಾಭ್ಯಾಸದ ಮೂಲಕ ಸುಧಾರಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು.
ಅಂತರಾಷ್ಟ್ರೀಯ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ನೇತೃತ್ವದಲ್ಲಿ ಯೋಗ ತರಬೇತಿಯನ್ನು ಆಯೋಜಿಸಲಾಯಿತು. ಕಳೆದ 47 ವರ್ಷಗಳಿಂದ ಮೂರುವರೆ ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಯೋಗ ತರಬೇತಿ ನೀಡಿ ಅತ್ಯುತ್ತಮ ಸೇವೆಯನ್ನು ಅವರು ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ ಜೀವರಾಜ್ ಸೊರಕೆ ಅವರು, ಪ್ರಸ್ತುತ ಸಮಾಜದಲ್ಲಿ ಬಹುತೇಕ ಜನರು ಒತ್ತಡಭರಿತ, ಆತಂಕ, ಹಾಗೂ ಅಸಮತೋಲಿತ ಜೀವನ ಶೈಲಿಯಿಂದ ಬಳಲುತ್ತಿದ್ದಾರೆ. ನಿಯಮಿತ ಯೋಗಾಭ್ಯಾಸದಿಂದ ವ್ಯಕ್ತಿಯು ತನ್ನ ಅಂತರಂಗದ ಜೊತೆಗೆ ಸಂಪರ್ಕ ಸಾಧಿಸಲು, ಮಾನಸಿಕ ಸಮತೋಲನವನ್ನು ಹಿಂಪಡೆದುಕೊಳ್ಳಲು ಹಾಗೂ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುತ್ತದೆ. ನಮ್ಮ ಮನೋವೈಕಲ್ಯ ಹಾಗೂ ಮಾನಸಿಕ ಕಳವಳವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಶಾರೀರಿಕ ದೌರ್ಬಲ್ಯದಿಂದ ದೂರವಿರಲು ಸಹಾಯಕವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಯುವಜನತೆಯನ್ನು ಯೋಗಾಭ್ಯಾಸದಲ್ಲಿ ತೊಡಗುವಂತೆ ಹುರಿದುಂಬಿಸಲಾಗುತ್ತದೆ. ನಿರಂತರ ಯೋಗಾಭ್ಯಾಸವು ಆರೋಗ್ಯ ಮತ್ತು ಸಂತೋಷ ನೆಮ್ಮದಿಯ ದಾರಿ ಎಂದು ಹೇಳಿದರು.
0 comments:
Post a Comment