3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ದುಬೈಯಿಂದ ಬರುವ ವೇಳೆ ಇಮಿಗ್ರೇಶನ್ ಅಧಿಕಾರಿಗಳ ಬಲೆಗೆ - Karavali Times 3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ದುಬೈಯಿಂದ ಬರುವ ವೇಳೆ ಇಮಿಗ್ರೇಶನ್ ಅಧಿಕಾರಿಗಳ ಬಲೆಗೆ - Karavali Times

728x90

5 September 2025

3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ದುಬೈಯಿಂದ ಬರುವ ವೇಳೆ ಇಮಿಗ್ರೇಶನ್ ಅಧಿಕಾರಿಗಳ ಬಲೆಗೆ

 ಮಂಗಳೂರು, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಕಾವೂರು ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 178/2016 ಕಲಂ 399, 402 ಐಪಿಸಿ ಮತ್ತು ನ್ಯಾಯಾಲಯದ ಎಸ್ ಸಿ ನಂಬ್ರ 14/2024 ಪ್ರಕರಣದ ಆರೋಪಿಯಾಗಿ ಕಳೆದ 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕಾವೂರು, ಕೆ ಎಚ್ ಬಿ ಕಾಲೊನಿ ದೇವಿನಗರ, ಲತಾ ನಿಲಯ ನಿವಾಸಿ ವಿಶಾಲ್ ಕುಮಾರ್ (26) ಎಂಬಾತನನ್ನು ಗುರುವಾರ ದುಬೈಯಿಂದ ಬರುವ ವೇಳೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ತಲೆ ಮರೆಸಿಕೊಂಡ ಆರೋಪಿಗೆ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಈತ ದುಬೈಗೆ ಹೋಗಿರುವ ಖಚಿತ ಮಾಹಿತಿ ಮೇರೆಗೆ ಇತನ ಮೇಲೆ ಎಲ್ ಒ ಸಿ ಹೊರಡಿಸಲಾಗಿತ್ತು. ಈತ ಆಗಸ್ಟ್ 4 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಈತನನ್ನು ಬ್ಯೂರೋ ಆಫ್ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಕಾವೂರು ಪೆÇಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ, 

ಈತನನ್ನು ಶುಕ್ರವಾರ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಈತನಿಗೆ ಸೆ 18ರವರೆಗೆ ನ್ಯಾಯಾಂಗ ಬಂದನ ವಿಧಿಸಿದೆ. ಈತ ಸುಮಾರು 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಈತನ ಮೇಲೆ ಕಾವೂರು ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 133/2025 ಕಲಂ 269 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ. ಈತನ ಮೇಲೆ ಬರ್ಕೆ ಪೆÇಲೀಸ್ ಠಾಣೆಯಲ್ಲಿಯೂ ಕೂಡ ಪ್ರಕರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ದುಬೈಯಿಂದ ಬರುವ ವೇಳೆ ಇಮಿಗ್ರೇಶನ್ ಅಧಿಕಾರಿಗಳ ಬಲೆಗೆ Rating: 5 Reviewed By: karavali Times
Scroll to Top