ಮುಲ್ಕಿ ಡಬ್ಬಲ್ ಮರ್ಡರ್ ಅರೋಪಿ ಅಲ್ಫೋನ್ಸ್ ಸಲ್ದಾನಾಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತ ಕೋರ್ಟ್ - Karavali Times ಮುಲ್ಕಿ ಡಬ್ಬಲ್ ಮರ್ಡರ್ ಅರೋಪಿ ಅಲ್ಫೋನ್ಸ್ ಸಲ್ದಾನಾಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತ ಕೋರ್ಟ್ - Karavali Times

728x90

19 January 2026

ಮುಲ್ಕಿ ಡಬ್ಬಲ್ ಮರ್ಡರ್ ಅರೋಪಿ ಅಲ್ಫೋನ್ಸ್ ಸಲ್ದಾನಾಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತ ಕೋರ್ಟ್

ಮಂಗಳೂರು, ಜನವರಿ 19, 2026 (ಕರಾವಳಿ ಟೈಮ್ಸ್) : ಮುಲ್ಕಿ ಡಬ್ಬಲ್ ಮರ್ಡರ್ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. ಶಿಕ್ಷೆಗೊಳಗಾದ ಅರೋಪಿಯನ್ನು ಮುಲ್ಕಿ ತಾಲೂಕು, ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ನಿವಾಸಿ ಆಲ್ಫೋನ್ಸ್ ಸಲ್ದಾನಾ ಎಂದು ಹೆಸರಿಸಲಾಗಿದೆ. 

ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಎಂಬಲ್ಲಿ 2020 ರ ಎಪ್ರಿಲ್ 29 ರಂದು ಆರೋಪಿ ಆಲ್ಫೋನ್ಸ್ ಸಲ್ದಾನಾ ತನ್ನ ನೆರೆ ಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜಾನನ್ನು ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯತಿಕೆ ಮಾಡುವ ನೆಪದಲ್ಲಿ ತನ್ನ ಮನೆಗೆ ಕರೆಸಿ ಗಲಾಟೆ ಮಾಡಿ ಚೂರಿಯಿಂದ ತಿವಿದು ಕೊಲೆ ಮಾಡಿದ್ದಲ್ಲದೇ, ರಕ್ಷಿಸಲು ಧಾವಿಸಿ ಬಂದ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜಾನ ಪತ್ನಿ ಶ್ರೀಮತಿ ಹೆಲೆನ್ ಡಿಸೋಜಾ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಎಂಬಾಕೆಯನ್ನು ಅಟ್ಟಾಡಿಸಿ ಚೂರಿಯಿಂದ ಅಮಾನುಷವಾಗಿ ತಿವಿದು ಕೊಲೆಗೈದಿದ್ದ. 

ಈ ಬಗ್ಗೆ ಮುಲ್ಕಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2020 ಕಲಂ 341, 504, 506, 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಅಂದಿನ ಮುಲ್ಕಿ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ್ ಪೆಕ್ಟರ್  ಜಯರಾಮ ಡಿ ಗೌಡ ಅವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಮುಲ್ಕಿ ಪೆÇಲೀಸ್ ಠಾಣಾ ಎಎಸ್ಸೈ ಉಮೇಶ್ ಕೆ ಹಾಗೂ ಎಚ್ ಸಿ ವಾದಿರಾಜ ಅವರು ತನಿಖಾ ಸಹಾಯಕರಾಗಿ ತನಿಖೆಗೆ ಸಹಕರಿಸಿದ್ದಾರೆ. ಸದ್ರಿ ಪ್ರಕರಣ ನ್ಯಾಯಾಲಯದಲ್ಲಿ ಎಸ್ ಸಿ ನಂಬ್ರ 69/2020 ರಂತೆ ವಿಚಾರಣೆ ನಡೆದಿದು 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ವಿಚಾರಣೆ ನಡೆಸಿ ಪ್ರಸ್ತುತ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಅರೋಪಿಗೆ ಜನವರಿ 19 ರಂದು ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪಿತ್ತಿದ್ದಾರೆ. 

ಸಾಕ್ಷಿ ವಿಚಾರಣೆ ಸಂದರ್ಭ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಅವರು ಅಭಿಯೋಜನೆ ಪರ ವಾದ ಮಂಡಿಸಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆ ಸಮಯ ಮುಲ್ಕಿ ಪೆÇಲೀಸ್ ಠಾಣಾ ಮಹಿಳಾ ಪಿಸಿ ಕಾವ್ಯಾ ಅವರು ಸಹಕರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮುಲ್ಕಿ ಡಬ್ಬಲ್ ಮರ್ಡರ್ ಅರೋಪಿ ಅಲ್ಫೋನ್ಸ್ ಸಲ್ದಾನಾಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತ ಕೋರ್ಟ್ Rating: 5 Reviewed By: karavali Times
Scroll to Top