ದಾನ-ಧರ್ಮ ಹೆಚ್ಚಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಈದ್ ಸಂಭ್ರಮ ಇಮ್ಮಡಿಗೊಳಿಸಿ : ಬಿ.ಎಚ್. ಉಸ್ತಾದ್ ಕರೆ - Karavali Times ದಾನ-ಧರ್ಮ ಹೆಚ್ಚಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಈದ್ ಸಂಭ್ರಮ ಇಮ್ಮಡಿಗೊಳಿಸಿ : ಬಿ.ಎಚ್. ಉಸ್ತಾದ್ ಕರೆ - Karavali Times

728x90

19 March 2026

ದಾನ-ಧರ್ಮ ಹೆಚ್ಚಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಈದ್ ಸಂಭ್ರಮ ಇಮ್ಮಡಿಗೊಳಿಸಿ : ಬಿ.ಎಚ್. ಉಸ್ತಾದ್ ಕರೆ

ಬಂಟ್ವಾಳ, ಮಾರ್ಚ್ 20, ಮಾರ್ಚ್, 2026 (ಕರಾವಳಿ ಟೈಮ್ಸ್) : ಈದ್ ಸಂಭ್ರಮದ ಹೆಸರಿನಲ್ಲಿ ಅನಾವಶ್ಯಕ ಆಡಂಬರ ಕಾರ್ಯಕ್ರಮಗಳ ಬದಲಾಗಿ ಸೃಷ್ಟಿಕರ್ತನಿಗೆ ಸಾಷ್ಟಾಂಗ ಅರ್ಪಿಸುವುದರ ಜೊತೆ ದಾನ-ಧರ್ಮಗಳನ್ನು ಹೆಚ್ಚಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಈದ್ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಮುಸ್ಲಿಯಾರ್ ಕರೆ ನೀಡಿದರು. 

29 ದಿನಗಳ ರಂಝಾನ್ ಉಪವಾಸ ಕೊನೆಗೊಳಿಸಿ ಶುಕ್ರವಾರ ಪವಿತ್ರ ಈದುಲ್-ಫಿತ್ರ್ ಹಬ್ಬದ ಹಿನ್ನಲೆಯಲ್ಲಿ ಮಸೀದಿಯಲ್ಲಿ ಶುಕ್ರವಾರ ನಡೆದ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣಕ್ಕೆ ನೇತೃತ್ವ ನೀಡಿ ಮಾತನಾಡಿದ ಅವರು, ತಮ್ಮಲ್ಲಿರುವ ಸಂಪತ್ತನ್ನು ಮೋಜು-ಮಸ್ತಿಗಾಗಿ ಉಪಯೋಗಿಸದೆ ಸಮಾಜದ ಬಡ-ಬಗ್ಗರ, ಅನಾಥರ, ಅಶಕ್ತರ ಕಣ್ಣೀರೊರೆಸುವುದರ ಜೊತೆಗೆ ಸಮಾಜದ ಒಳಿತಿಗೆ ಬಳಸುವಂತಾಗಬೇಕು. ಕ್ಷಣ ಕ್ಷಣಕ್ಕೂ ಮರಣಾಧಿಕ್ಯಗೊಳ್ಳುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಸೃಷ್ಟಿಕರ್ತನು ನಮಗೆ ದೀರ್ಘಾಯುಷ್ಯ, ಆರೋಗ್ಯ ಕರುಣಿಸಿ ಅನುಗ್ರಹಿಸಿದ್ದಕ್ಕಾಗಿ ಅಲ್ಲಾಹನಿಗೆ ಸ್ತುತಿ ಅರ್ಪಿಸುವಂತಾಗಬೇಕು ಹಾಗೂ ಬಂಧು-ಮಿತ್ರರನ್ನು ಖುದ್ದಾಗಿ ಭೇಟಿಯಾಗಿ ಕಾಣುವುದರೊಂದಿಗೆ ಬಂಧುತ್ವ ವೃದ್ದಿಸುವ ಮೂಲಕ ಜೀವನದಲ್ಲಿ ಇನ್ನಷ್ಟು ಒಳಿತುಗಳನ್ನು ಮಾಡಲು ಈದ್ ಪ್ರೇರಣೆಯಾಗಬೇಕು ಎಂದರು. 

ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ ಬಳಿಕ ಜಮಾಅತ್ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ದಾನ-ಧರ್ಮ ಹೆಚ್ಚಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಈದ್ ಸಂಭ್ರಮ ಇಮ್ಮಡಿಗೊಳಿಸಿ : ಬಿ.ಎಚ್. ಉಸ್ತಾದ್ ಕರೆ Rating: 5 Reviewed By: karavali Times
Scroll to Top