ಬೈಕಂಪಾಡಿ : ಗ್ಯಾಸ್ ಪೈಪ್ ಲೈನ್ ಸೋರಿಕೆ ಬಗ್ಗೆ ಅಣುಕು ಪ್ರದರ್ಶನ - Karavali Times ಬೈಕಂಪಾಡಿ : ಗ್ಯಾಸ್ ಪೈಪ್ ಲೈನ್ ಸೋರಿಕೆ ಬಗ್ಗೆ ಅಣುಕು ಪ್ರದರ್ಶನ - Karavali Times

728x90

13 March 2026

ಬೈಕಂಪಾಡಿ : ಗ್ಯಾಸ್ ಪೈಪ್ ಲೈನ್ ಸೋರಿಕೆ ಬಗ್ಗೆ ಅಣುಕು ಪ್ರದರ್ಶನ

ಮಂಗಳೂರು, ಮಾರ್ಚ್ 13, ಮಾರ್ಚ್, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ನೈಸರ್ಗಿಕ ಅನಿಲ ಪೂರೈಸಲು ನಗರ ಅನಿಲ ವಿತರಣಾ ಜಾಲವನ್ನು ಅಭಿವೃದ್ಧಿಪಡಿಸುತ್ತಿರುವ ಭಾರತ ಸರ್ಕಾರದ ಸಂಸ್ಥೆಯಾದ ಗೈಲ್ (ಇಂಡಿಯಾ) ಲಿಮಿಟೆಡ್ ಇದರ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ಗೈಲ್ ಗ್ಯಾಸ್ ಲಿಮಿಟೆಡ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಬೈಕಂಪಾಡಿಯಲ್ಲಿ ಮಾರ್ಚ್ 13 ರಂದು ಆಫ್-ಸೈಟ್ ತುರ್ತು ಅಣಕು ಡ್ರಿಲ್ ನಡೆಸಲಾಯಿತು. 

ಕಾರ್ಖಾನೆಗಳ ಉಪನಿರ್ದೇಶಕ ಡಾ. ರಾಜೇಶ್ ಮಿಶ್ರಿಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯ್, ಕಂದಾಯ ಇಲಾಖೆ, ಕರ್ನಾಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ, ಎಸ್ ಡಿ ಆರ್ ಎಫ್, ನವ ಮಂಗಳೂರು ಬಂದರು ಪ್ರಾಧಿಕಾರ ಮತ್ತು ಗೈಲ್ ಮತ್ತು ಜಿ ಎಂ ಪಿ ಎಲ್ ಸದಸ್ಯರು ಸೇರಿದಂತೆ ಹತ್ತಿರದ ಕೈಗಾರಿಕೆಗಳ ವೀಕ್ಷಕರು ಮತ್ತು ವಿವಿಧ ಜಿಲ್ಲಾ ಸಂಸ್ಥೆಗಳ ಅಧಿಕಾರಿಗಳು ಈ ಕವಾಯತಿನಲ್ಲಿ ಭಾಗವಹಿಸಿದ್ದರು.

ಬೈಕಂಪಾಡಿಯ ಚಿತ್ರಾಪುರದಲ್ಲಿ ಎಂಡಿಪಿಇ ಅನಿಲ ವಿತರಣಾ ಪೈಪ್‍ಲೈನ್ ನಿಂದ ಅನಿಲ ಸೋರಿಕೆ ನಂತರ ಬೆಂಕಿ ಕಾಣಿಸಿಕೊಂಡ ಅಣಕು ಸನ್ನಿವೇಶವನ್ನು ಆಫ್-ಸೈಟ್ ತುರ್ತು ಡ್ರಿಲ್ ಭಾಗವಾಗಿ ರಚಿಸಲಾಯಿತು. ಡ್ರಿಲ್ ಸಮಯದಲ್ಲಿ ಅನಿಲ ಸೋರಿಕೆಯಿಂದ ಪೀಡಿತರಾದ ಗಾಯಾಳುಗಳನ್ನು ಅಣಕು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಯಿತು ಮತ್ತು ಅವರನ್ನು ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಡ್ರಿಲ್ ಸಮಯದಲ್ಲಿ ಪೀಡಿತ ಪ್ರದೇಶವನ್ನು ಸುತ್ತುವರಿಯಲಾಯಿತು. ಎಲ್ಲಾ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಸಮನ್ವಯದೊಂದಿಗೆ ತಮಗೆ ವಹಿಸಲಾದ ಜವಾಬ್ದಾರಿಗಳನ್ನು ನಿರ್ವಹಿಸಿದರು.

ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ತಾಂತ್ರಿಕ ಸಂಪನ್ಮೂಲಗಳ ಪರಿಣಾಮಕಾರಿತ್ವ ಮತ್ತು ಸಮರ್ಪಕತೆಯನ್ನು ಮೌಲ್ಯಮಾಪನ ಮಾಡುವುದು, ಗೈಲ್ ಗ್ಯಾಸ್ ಮತ್ತು ಇತರ ಪ್ರತಿಕ್ರಿಯೆ ಸಂಸ್ಥೆಗಳ ತಂಡದ ತ್ವರಿತ ಪ್ರತಿಕ್ರಿಯೆಯನ್ನು ನಿರ್ಣಯಿಸುವುದು ಮತ್ತು ವಿಪತ್ತು ಮತ್ತು ತುರ್ತುಸ್ಥಿತಿ ಸಿದ್ಧತೆ ವ್ಯವಸ್ಥೆಗಳನ್ನು ಬಲಪಡಿಸುವುದು ಈ ಅಭ್ಯಾಸದ ಪ್ರಾಥಮಿಕ ಉದ್ದೇಶವಾಗಿತ್ತು. 

  • Blogger Comments
  • Facebook Comments

0 comments:

Post a Comment

Item Reviewed: ಬೈಕಂಪಾಡಿ : ಗ್ಯಾಸ್ ಪೈಪ್ ಲೈನ್ ಸೋರಿಕೆ ಬಗ್ಗೆ ಅಣುಕು ಪ್ರದರ್ಶನ Rating: 5 Reviewed By: karavali Times
Scroll to Top