ವಿಧಾನಸಭಾ ಚುನಾವಣೆ ಹಿನ್ನಲೆಯ : ಜಿಲ್ಲಾ ಎಸ್ಪಿಯಿಂದ ಅಂತರ್ ರಾಜ್ಯ ಗಡಿ ತಪಾಸಣೆ - Karavali Times ವಿಧಾನಸಭಾ ಚುನಾವಣೆ ಹಿನ್ನಲೆಯ : ಜಿಲ್ಲಾ ಎಸ್ಪಿಯಿಂದ ಅಂತರ್ ರಾಜ್ಯ ಗಡಿ ತಪಾಸಣೆ - Karavali Times

728x90

13 March 2023

ವಿಧಾನಸಭಾ ಚುನಾವಣೆ ಹಿನ್ನಲೆಯ : ಜಿಲ್ಲಾ ಎಸ್ಪಿಯಿಂದ ಅಂತರ್ ರಾಜ್ಯ ಗಡಿ ತಪಾಸಣೆ

ಮಂಗಳೂರು, ಮಾರ್ಚ್ 14, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಡಾ ವಿಕ್ರಂ ಅಮಟೆ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಅಂತರ ರಾಜ್ಯ ಗಡಿಯಲ್ಲಿರುವ  ಪಾಣಾಜೆ, ಈಶ್ವರಮಂಗಳಗಳಲ್ಲಿರುವ ಅಂತರ್ ರಾಜ್ಯ ಚೆಕ್ ಪೊಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 

ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣೆ ಕರ್ತವ್ಯಗಳ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರಲ್ಲದೆ ಚೆಕ್ ಪೊಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. 

ನಕ್ಸಲ್ ಪೀಡಿತ ಮತಗಟ್ಟೆಗಳಾದ ಕೊಳ್ಳಮರಾಗು, ಕಲ್ಕುಂದಗಳಿಗೂ ಎಸ್ಪಿ ಭೇಟಿ ನೀಡಿ ಪರಿಶೀಲಿಸಿದರು. ಚುನಾವಣೆ ಪ್ರಯುಕ್ತ ಸೂಕ್ಷ್ಮ ಪ್ರದೇಶಗಳಾದ ಸುಬ್ರಮಣ್ಯ ಪಿಯು ಕಾಲೇಜು ಮತಗಟ್ಟೆ, ಕೊಂಬಾರುಗಳಿಗೆ ಭೇಟಿ ನೀಡಿ ಯೂಥ್ ಕಮಿಟಿ ಸಭೆಗಳನ್ನು ನಡೆಸಿ, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು. 

ಅಂತರ್‍ರಾಜ್ಯ ಹಾಗೂ ಅಂತರ್ ಜಿಲ್ಲೆ ಚೆಕ್ ಪೊಸ್ಟ್‍ಗಳಿಗೆ ಎಡಿಶನಲ್ ಎಸ್ಪಿ ಧರ್ಮಪ್ಪ, ಹಾಗೂ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಗಳು ಭೇಟಿ ನೀಡಿ ತಪಾಸಣೆ ನಡೆಸಿದರು. ಸಿಬ್ಬಂದಿಗಳಿಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ತಿಳುವಳಿಕೆ ನೀಡಿದರು. 

  • Blogger Comments
  • Facebook Comments

0 comments:

Post a Comment

Item Reviewed: ವಿಧಾನಸಭಾ ಚುನಾವಣೆ ಹಿನ್ನಲೆಯ : ಜಿಲ್ಲಾ ಎಸ್ಪಿಯಿಂದ ಅಂತರ್ ರಾಜ್ಯ ಗಡಿ ತಪಾಸಣೆ Rating: 5 Reviewed By: karavali Times
Scroll to Top