ಜಮೀನು ವಿವಾದ : ಕಿನ್ನಿಗೋಳಿಯಲ್ಲಿ ಡಬ್ಬಲ್ ಮರ್ಡರ್ - Karavali Times ಜಮೀನು ವಿವಾದ : ಕಿನ್ನಿಗೋಳಿಯಲ್ಲಿ ಡಬ್ಬಲ್ ಮರ್ಡರ್ - Karavali Times

728x90

29 April 2020

ಜಮೀನು ವಿವಾದ : ಕಿನ್ನಿಗೋಳಿಯಲ್ಲಿ ಡಬ್ಬಲ್ ಮರ್ಡರ್




ಮಂಗಳೂರು (ಕರಾವಳಿ ಟೈಮ್ಸ್) : ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ನಗರದ ಹೊರವಲಯದ ಕಿನ್ನಿಗೋಳಿಯಲ್ಲಿ ಹಾಡಹಗಲೇ ದಂಪತಿಯನ್ನು ನೆರೆಮನೆಯ ದುಷ್ಕರ್ಮಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಸ್ಥಳೀಯ ನಿವಾಸಿ ವಿನ್ಸೆಂಟ್ ಡಿ’ಸೋಜ (48) ಹಾಗೂ ಅವರ ಪತ್ನಿ ಹೆಲಿನ್ ಡಿ’ಸೋಜ (43) ಎಂಬವರೇ ಕೊಲೆಗೀಡಾದ ದುರ್ದೈವಿಗಳು. ಆರೋಪಿ ನೆರೆ ಮನೆಯ ಅಲ್ಫೋನ್ಸ್ ಸಲ್ದಾನಾ (51) ನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಜಮೀನಿನ ವಿವಾದದ ಹಿನ್ನೆಲೆಯಲ್ಲಿ ದಂಪತಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ತಪೆÇ್ಪಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮನೆ ಪಕ್ಕದ ಜಾಗದ ತಕರಾರಿನ ಹಿನ್ನೆಲೆಯಲ್ಲಿ ಆರೋಪಿ ಅಲ್ಫೋನ್ಸ್ ಸಲ್ದಾನಾ ಪಿಕ್ಕಾಸು ಹಾಗೂ ಹಾರೆಯಿಂದ ದಂಪತಿಗೆ ಗಂಭೀರವಾಗಿ ಹಲ್ಲೆ ಮಾಡಿ ಮನೆ ಮುಂಭಾಗದಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮುಲ್ಕಿ ಪೆÇಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಜಮೀನು ವಿವಾದ : ಕಿನ್ನಿಗೋಳಿಯಲ್ಲಿ ಡಬ್ಬಲ್ ಮರ್ಡರ್ Rating: 5 Reviewed By: karavali Times
Scroll to Top