ಮಂಗಳೂರು, ಫೆ. 04, 2021 (ಕರಾವಳಿ ಟೈಮ್ಸ್) : ನಗರದ ಪಾಂಡೇಶ್ವರದ ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ ಇದರ ಬಿ.ಕಾಂ. ವಿಭಾಗದ ವತಿಯಿಂದ ಕ್ಯಾಂಪಸ್ ಕ್ಲೀನಿಂಗ್ ಅಭಿಯಾನ ನಡೆಯಿತು.
ಬಿ.ಕಾಂ. ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಆಶ್ರಯದಲ್ಲಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ ಡೀನ್ ಪೆÇ್ರ ಕೀರ್ತನ್ ರಾಜ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆವರಣದಲ್ಲಿದ್ದ ಚಾಕಲೇಟ್ ರೇಪರ್ಗಳು, ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ತೆಗೆದು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.
ಈ ಸಂದರ್ಭ ಬಿ.ಕಾಂ. ವಿಭಾಗದ ಮುಖ್ಯಸ್ಥೆ ಪೆÇ್ರ. ಶರ್ಮಿಳಾ ಶೆಟ್ಟಿ, ಎನ್ಎಸ್ಎಸ್ ಸಂಯೋಜಕಿ ಪೆÇ್ರ. ಶಿಲ್ಪಾ ಕೆ., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರಕಾಶ್ ಕಾಂಚನ್ ಭಾಗವಹಿಸಿದ್ದರು.
4 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment