ಸಜಿಪಮೂಡ ವಲಯ ಕಾಂಗ್ರೆಸ್ಸಿನಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಸಜಿಪಮೂಡ ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಬೊಳ್ಳಾಯಿ ಪೇಟೆಯಲ್ಲಿ ಆಚರಿಸಲಾಯಿತು.
ತಾ ಪಂ ಮಾಜಿ ಸದಸ್ಯ ಸಂಜೀವ ಪೂಜಾರಿ ಧ್ವಜಾರೋಹಣಗೈದರು. ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್. ಅಬ್ದುಲ್ ಕರೀಂ, ಸಜಿಪಮೂಡ ಗ್ರಾ ಪಂ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದಿಕ್ ಕೊಳಕೆ, ಪ್ರಮುಖರಾದ ಗಿರೀಶ್ ಪೆರ್ವ, ಉಮರಬ್ಬ ಮೊದಲಾದವರು ಭಾಗವಹಿಸಿದ್ದರು.
ಅಮ್ಟೂರು ವಲಯ ಕಾಂಗ್ರೆಸ್ಸಿನಿಂದ ಸ್ವಾತಂತ್ರ್ಯೋತ್ಸವ
ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಅಮ್ಟೂರು ವಲಯ ಕಾಂಗ್ರೆಸ್ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಇಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರಿ ಮೈದಾನದಲ್ಲಿ ಆಚರಿಸಲಾಯಿತು.
ಅಮ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷ, ಗ್ರಾ ಪಂ ಸದಸ್ಯ ರಾಘವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಮಾಜಿ ಸದಸ್ಯೆ ಐಡಾ ಸುರೇಶ್ ಧ್ವಜಾರೋಹಣಗೈದರು. ಗ್ರಾ ಪಂ ಮಾಜಿ ಸದಸ್ಯರಾದ ವೇದಾವತಿ ಪೂಜಾರಿ, ಮಹಮ್ಮದ್, ಪ್ರಮುಖರಾದ ಜಯಂತ ಪೂಜಾರಿ ಕಟ್ಟೆಮಾರ್, ಗಣೇಶ್ ರೈ ಬೈದರಡ್ಕ, ರಾಮ ಪೂಜಾರಿ ಅಮ್ಟೂರು, ಧನಂಜಯ ರೈ ಬಾಲಿಕೆ, ಸುಲೈಮಾನ್ ನೆತ್ತಿಕಲ್ಲು, ಶಿವಪ್ರಸಾದ್ ಅಮ್ಟೂರು, ಮುನ್ನಝು ಅಮ್ಟೂರು, ಅಬ್ದುಲ್ ಖಾದರ್ ಅಮ್ಟೂರು, ಹರೀಶ ಅಮ್ಟೂರು, ಮೌರಿಸ್ ಡಿ’ಸೋಜ ಕರಿಂಗಾಣ, ಕಿರಣ್ ಕರಿಂಗಾಣ, ಜಗದೀಶ್ ಕರಿಂಗಾಣ, ವಿಶಾಲ್ ಬಿ.ಎಸ್. ಕೊಡಿ, ಲೈಸನ್ ಬಿ.ಎಸ್. ಕೊಡಿ, ವಿಕ್ಟರ್ ಡಿ’ಸೋಜ ಬಿ.ಎಸ್ ಕೊಡಿ, ಸಿನಾನ್ ನೆತ್ತಿಕಲ್ಲು, ಸಪನ್ ನೆತ್ತಿಕಲ್ಲು, ಸೈಪು ನೆತ್ತಿಕಲ್ಲು, ಪ್ರವೀಣ್ ಕ್ರಾಸ್ತ, ಇಬ್ರಾಹಿಂ ಅಮ್ಟೂರು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment