ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ಆಲಡ್ಕ ಆಲಡ್ಕ ಶಾಖಾ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಚೇರಿಯಲ್ಲಿ ಆಚರಿಸಲಾಯಿತು.
ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಧ್ವಜಾರೋಹಣ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಉಸ್ತಾದ್ ಅಬೂಸ್ವಾಲಿಹ್ ಫೈಝಿ ಸಂದೇಶ ನೀಡಿದರು. ಶಾಖಾ ಕಾರ್ಯದರ್ಶಿ ಬಶೀರ್ ಬೇಕರಿ, ಪ್ರಮುಖರಾದ ಅಬ್ದುಲ್ ಖಾದರ್ ಮದನಿ, ಮುಹಮ್ಮದ್ ಶಫೀಕ್, ಅಬ್ದುಲ್ ಮಜೀದ್ ಬೋಳಂಗಡಿ, ಹಾಜಿ ಪಿ ಬಿ ಅಹಮದ್, ಅಬ್ದುಲ್ ಅಝೀಝ್ ಪಿ.ಐ. ಇಸಾಕ್ ಫೇಶನ್ವೇರ್, ಅಬ್ದುಲ್ ಖಾದರ್ ಪೈಂಟರ್, ರಫೀಕ್ ಇನೋಳಿ, ಹಾಜಿ ಅಹಮದ್ ಶಾಫಿ, ಹನೀಫ್ ಡ್ರೈ ಫಿಶ್, ಉಮ್ಮರ್ ಫಾರೂಖ್, ಸಿದ್ದೀಕ್, ರಫೀಕ್ ಬೋಗೋಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment