ಬಂಟ್ವಾಳ, ಮಾರ್ಚ್ 31, 2022 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ನಡೆಯುವ ಪ್ರಕ್ರಿಯೆ ಇರುವ ಕಾರಣಕ್ಕಾಗಿ ಎಪ್ರಿಲ್ 1 ರಿಂದ 10ರವರೆಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪಹಣಿ ವಿತರಣೆ ಇರುವುದಿಲ್ಲ ಎಂದು ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಮತ್ತು ಪಹಣಿ ವಿತರಣಾ ಕೆಲಸ ಕಾರ್ಯಗಳು ಈ 10 ದಿನಗಳ ಕಾಲ ಸಂಪೂರ್ಣ ಸ್ಥಗಿತಗೊಳ್ಳಲಿವೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment