ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರಿಂದ ಧರ್ಮಸ್ಥಳ ಹಾಗೂ ಲಾಯಿಲ ದೇವಸ್ಥಾನಕ್ಕೆ ಭೇಟಿ - Karavali Times ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರಿಂದ ಧರ್ಮಸ್ಥಳ ಹಾಗೂ ಲಾಯಿಲ ದೇವಸ್ಥಾನಕ್ಕೆ ಭೇಟಿ - Karavali Times

728x90

25 April 2023

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರಿಂದ ಧರ್ಮಸ್ಥಳ ಹಾಗೂ ಲಾಯಿಲ ದೇವಸ್ಥಾನಕ್ಕೆ ಭೇಟಿ

ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಯು ರಾಜೇಶ್ ನಾಯಕ್ ಅವರು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವಿರೇಂದ್ರ ಹೆಗ್ಗಡೆಯವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.

ಅದೇ ರೀತಿ ಬೆಳ್ತಂಗಡಿ ಲ್ಯಾಲ ವೆಂಕಟರಮಣ ದೇವಸ್ಥಾನಕ್ಕೂ ಭೇಟಿ ನೀಡಿದ ಶಾಸಕ ರಾಜೇಶ್ ನಾಯಕ್ ಕಾಶಿಮಠಾಧಿಪತಿ  ಶ್ರೀಮದ್  ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶ್ರೀರ್ವಾದ ಪಡೆದರು.

ಈ ಸಂದರ್ಭ ಬಂಟ್ವಾಳ ಪುರಸಭಾ ಸದಸ್ಯ ಎ ಗೋವಿಂದ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ಉದಯಕುಮಾರ್ ರಾವ್ ಸಹಿತ ಮುಖಂಡರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರಿಂದ ಧರ್ಮಸ್ಥಳ ಹಾಗೂ ಲಾಯಿಲ ದೇವಸ್ಥಾನಕ್ಕೆ ಭೇಟಿ Rating: 5 Reviewed By: karavali Times
Scroll to Top