ಬಂಟ್ವಾಳ : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ಕದ್ದೊಯ್ದ ಕಳ್ಳರು - Karavali Times ಬಂಟ್ವಾಳ : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ಕದ್ದೊಯ್ದ ಕಳ್ಳರು - Karavali Times

728x90

7 March 2024

ಬಂಟ್ವಾಳ : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ಕದ್ದೊಯ್ದ ಕಳ್ಳರು

ಬಂಟ್ವಾಳ, ಮಾರ್ಚ್ 07, 2024 (ಕರಾವಳಿ ಟೈಮ್ಸ್) : ಬೀಗ ಹಾಕಿದ್ದ ಮನೆಗೆ ಹಿಂಬದಿ ಬಾಗಿಲು ಮುರಿದು ಒಳಪ್ರವೇಶೀಸಿದ ಕಳ್ಳರು ಮನೆಯ ಅಟ್ಟದಲ್ಲಿಟ್ಟಿದ್ದ ಸಾವಿರಾರು ರೂಪಾಯಿ ಮೌಲ್ಯದ ಸುಲಿಯದ ಅಡಿಕೆ ಕಳವುಗೈದ ಘಟನೆ ಬಿ ಮೂಡ ಗ್ರಾಮದ ಬಂಟ್ವಾಳ ಬೈಪಾಸ್ ಬಳಿ ನಡೆದಿದೆ. 

ಬಂಟ್ವಾಳ-ಬೈಪಾಸ್ ರಸ್ತೆ ನಿವಾಸಿ ಕೆ ಜಿನಚಂದ್ರ ಜೈನ್ (65) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು 11 ಗೋಣಿ ಚೀಲದಲ್ಲಿ ಸುಮಾರು 3 ಕ್ವಿಂಟಾಲ್ ಸುಲಿಯದ ಅಡಿಕೆಯನ್ನು ಒಣಗಿಸಿ ವಾರದ ಹಿಂದೆ ಮನೆಯ ಅಟ್ಟದಲ್ಲಿ ಇಟ್ಟಿದ್ದರು. ಮಾರ್ಚ್ 1 ರಂದು ಸಂಜೆ ಇವರು ಮನೆಗೆ ಬೀಗ ಹಾಕಿ ತೆರಳಿದ್ದವರು ಮಾ 2 ರಂದು ಬೆಳಿಗ್ಗೆ ಬಂದು ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆರೆದಿರುವುದು ಕಂಡು ಬಂದು ಪರಿಶೀಲನೆ ನಡೆಸಿದಾಗ ಅಡಿಕೆ ಕಳವು ಕೃತ್ಯ ಬೆಳಕಿಗೆ ಬಂದಿದೆ. 

ಮನೆಯ ಹಿಂಭಾಗದ ಕಿಟಕಿಯ ರಾಡ್ ತೆರೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಯ ಅಟ್ಟದಲ್ಲಿ  ಸುಲಿಯದೇ ಇಟ್ಟಿದ್ದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ 11 ಗೋಣಿ ಚೀಲ ಅಡಕೆಯನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ಕದ್ದೊಯ್ದ ಕಳ್ಳರು Rating: 5 Reviewed By: karavali Times
Scroll to Top