ಬೆಳ್ತಂಗಡಿ : ಬೈಕ್ ಡಿಕ್ಕಿ ಹೊಡೆದು ಶಾಲಾ ಬಾಲಕ ಆಸ್ಪತ್ರೆಗೆ - Karavali Times ಬೆಳ್ತಂಗಡಿ : ಬೈಕ್ ಡಿಕ್ಕಿ ಹೊಡೆದು ಶಾಲಾ ಬಾಲಕ ಆಸ್ಪತ್ರೆಗೆ - Karavali Times

728x90

25 March 2024

ಬೆಳ್ತಂಗಡಿ : ಬೈಕ್ ಡಿಕ್ಕಿ ಹೊಡೆದು ಶಾಲಾ ಬಾಲಕ ಆಸ್ಪತ್ರೆಗೆ

ಬೆಳ್ತಂಗಡಿ, ಮಾರ್ಚ್ 25, 2024 (ಕರಾವಳಿ ಟೈಮ್ಸ್) : ಶಾಲಾ ಬಾಲಕಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಆಸ್ಪತ್ರೆಗೆ ದಾಖಲಾದ ಘಟನೆ ಬೆಳ್ತಂಗಡಿ ಕಸ್ಬಾ ಗ್ರಾಮದ ಚರ್ಚ್ ಕ್ರಾಸ್ ಎಂಬಲ್ಲಿ ಸಂಭವಿಸಿದೆ. 

ಗಾಯಗೊಂಡ ಶಾಲಾ ಬಾಲಕನನ್ನು ಲಾಯಿಲ ಗ್ರಾಮದ ನಿವಾಸಿ ಹೇಮಚಂದ್ರ ಅವರ ಪುತ್ರ, ಇಲ್ಲಿನ ವಾಣಿ ಶಾಲಾ ವಿದ್ಯಾರ್ಥಿ ಪ್ರಣಿತ್ ಶೆಟ್ಟಿ (10) ಎಂದು ಹೆಸರಿಸಲಾಗಿದೆ. ಬಾಲಕ ಪ್ರಣಿತ್ ಶೆಟ್ಟಿ ಮನೆಯಿಂದ ವಾಣಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಚರ್ಚ್ ಕ್ರಾಸ್ ಎಂಬಲ್ಲಿ ರಸ್ತೆ ದಾಟುತ್ತಿರುವಾಗ, ಗುರುವಾಯನಕೆರೆ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರೆತೆಗೆ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದು, ಆತನನ್ನು ಗುರುವಾಯನಕೆರೆ ಆಭಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಬೈಕ್ ಡಿಕ್ಕಿ ಹೊಡೆದು ಶಾಲಾ ಬಾಲಕ ಆಸ್ಪತ್ರೆಗೆ Rating: 5 Reviewed By: karavali Times
Scroll to Top