ಉಜಿರೆ : ವ್ಯಕ್ತಿಗೆ ಕಾರಿನಲ್ಲಿ ಬಂದ ಮೂವರ ತಂಡದಿಂದ ಜೀವಬೆದರಿಕೆ - Karavali Times ಉಜಿರೆ : ವ್ಯಕ್ತಿಗೆ ಕಾರಿನಲ್ಲಿ ಬಂದ ಮೂವರ ತಂಡದಿಂದ ಜೀವಬೆದರಿಕೆ - Karavali Times

728x90

22 March 2024

ಉಜಿರೆ : ವ್ಯಕ್ತಿಗೆ ಕಾರಿನಲ್ಲಿ ಬಂದ ಮೂವರ ತಂಡದಿಂದ ಜೀವಬೆದರಿಕೆ

ಬೆಳ್ತಂಗಡಿ, ಮಾರ್ಚ್ 22, 2024 (ಕರಾವಳಿ ಟೈಮ್ಸ್) : ವ್ಯಕ್ತಿಯೊಬ್ಬರಿಗೆ ಕಾರಿನಲ್ಲಿ ಬಂದ ಮೂವರ ತಂಡ ಅವಾಚ್ಯವಾಗಿ ಬೈದು ಜೀವಬೆದರಿಕೆ ಒಡ್ಡಿದ ಘಟನೆ ಉಜಿರೆ ರಥ ಬೀದಿಯಲ್ಲಿ ಗುರುವಾರ ರಾತ್ರಿ ನಡೆದಿದೆ. 

ಉಜಿರೆ ನಿವಾಸಿ ಹರೀಶ್  ಆಚಾರ್ಯ (35) ಅವರು ಗುರುವಾರ ರಾತ್ರಿ ಉಜಿರೆ ಗ್ರಾಮದ  ರಥಬೀದಿಯಲ್ಲಿರುವ ವೇಳೆ ಆರೋಪಿಗಳಾದ ಉಜಿರೆ ನಿವಾಸಿಗಳಾದ ಮನೋಜ (35), ಜಯಂತ (34) ಹಾಗು ಕಲ್ಮಂಜ ನಿವಾಸಿ ಪ್ರಜ್ವಲ್  ಗೌಡ ಕೆ ವಿ (35) ಅವರು ಕೆಎ21 ಎನ್9957 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದು ಹರೀಶ್ ಆಚಾರ್ಯ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2024 ಕಲಂ 143, 147, 341, 504, 506, ಆರ್/ಡಬ್ಲು 149 ಐಪಿಸಿಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಉಜಿರೆ : ವ್ಯಕ್ತಿಗೆ ಕಾರಿನಲ್ಲಿ ಬಂದ ಮೂವರ ತಂಡದಿಂದ ಜೀವಬೆದರಿಕೆ Rating: 5 Reviewed By: karavali Times
Scroll to Top