ಸರಪಾಡಿ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖಾಧಿಕಾರಿಗಳ ದಾಳಿ, ಕಾರ್ಮಿಕರು ಪರಾರಿ, ಮರಳು ಸಹಿತ ಸೊತ್ತು ವಶ - Karavali Times ಸರಪಾಡಿ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖಾಧಿಕಾರಿಗಳ ದಾಳಿ, ಕಾರ್ಮಿಕರು ಪರಾರಿ, ಮರಳು ಸಹಿತ ಸೊತ್ತು ವಶ - Karavali Times

728x90

1 March 2024

ಸರಪಾಡಿ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖಾಧಿಕಾರಿಗಳ ದಾಳಿ, ಕಾರ್ಮಿಕರು ಪರಾರಿ, ಮರಳು ಸಹಿತ ಸೊತ್ತು ವಶ

 ಬಂಟ್ವಾಳ, ಮಾರ್ಚ್ 02, 2024 (ಕರಾವಳಿ ಟೈಮ್ಸ್) : ತಾಲೂಕಿನ ಸರಪಾಡಿ ಗ್ರಾಮದ ಪಾದಿಲ-ಪೆರಾಳ ಎಂಬಲ್ಲಿ ನೇತ್ರಾವತಿ ನದಿ ಬದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕಾ ಅಡ್ಡೆಗೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಗುರುವಾರ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ಗಿರೀಶ್ ಮೋಹನ್ ಎಸ್ ಎನ್ ಅವರ ನೇತೃತ್ವದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ. ದಾಳಿ ಸ್ಥಳದಲ್ಲಿದ್ದ ಕಾರ್ಮಿಕರು ಪರಾರಿಯಾಗಿದ್ದು, ಕೃತ್ಯಕ್ಕೆ ಬಳಸಿದ ದೋಣಿ, ದೋಣಿಯ ಚಾಲನೆಗೆ ಬಳಸುವ ಮೋಟಾರು, ಗ್ಯಾಸ್ ಸಿಲಿಂಡರ್ ಸಹಿತ ಸ್ಥಳದಲ್ಲಿದ್ದ ಸೊತ್ತುಗಳನ್ನು ಹಾಗೂ  ಸುಮಾರು 25 ಎಂ ಟಿ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

 ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸರಪಾಡಿ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖಾಧಿಕಾರಿಗಳ ದಾಳಿ, ಕಾರ್ಮಿಕರು ಪರಾರಿ, ಮರಳು ಸಹಿತ ಸೊತ್ತು ವಶ Rating: 5 Reviewed By: lk
Scroll to Top