ರಾಮಕುಂಜ : ಮಹಿಂದ್ರ ಜಿತೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಆಸ್ಪತ್ರೆಗೆ - Karavali Times ರಾಮಕುಂಜ : ಮಹಿಂದ್ರ ಜಿತೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಆಸ್ಪತ್ರೆಗೆ - Karavali Times

728x90

5 March 2024

ರಾಮಕುಂಜ : ಮಹಿಂದ್ರ ಜಿತೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಆಸ್ಪತ್ರೆಗೆ

ಕಡಬ, ಮಾರ್ಚ್ 06, 2024 (ಕರಾವಳಿ ಟೈಮ್ಸ್) : ಮಹಿಂದ್ರ ಜಿತೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಕಡಬ ಪೊಲೀಸ್ ಠಾಣ ವ್ಯಾಪ್ತಿಯ ರಾಮಕುಂಜ ಗ್ರಾಮದ ಗೋಳತ್ತಡಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. 

ಗಾಯಾಳು ಬೈಕ್ ಸವಾರನನ್ನು ರಾಮಕುಂಜ ನಿವಾಸಿ ಶ್ರಿಜೀಶ್ (20) ಎಂದು ಹೆಸರಿಸಲಾಗಿದೆ. ಜಯೇಂದ್ರ ಆಚಾರ್ಯ (33) ಅವರು ಚಲಾಯಿಸುತ್ತಿದ್ದ ಮಹಿಂದ್ರ ಜಿತೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಅವರನ್ನು ಪುತ್ತೂರು ಸರಕಾರಿ ಅಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿ ಚಾಲಕ ಜಯೇಂದ್ರ ಆಚಾರ್ಯ ಅವರಿಗೂ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಗಾಯಾಳು ಶ್ರಿಜೀಶ್ ಅವರ ಸಂಬಂಧಿ ಲೋಕೇಶ್ ಅವರು ನೀಡಿದ ದೂರಿನ ಮೇರೆಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಮಕುಂಜ : ಮಹಿಂದ್ರ ಜಿತೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಆಸ್ಪತ್ರೆಗೆ Rating: 5 Reviewed By: karavali Times
Scroll to Top