ಇಸ್ಪೀಟ್ ಅಡ್ಡೆಗೆ ವಿಟ್ಲ ಪೊಲೀಸರ ದಾಳಿ : ನಾಲ್ವರು ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ - Karavali Times ಇಸ್ಪೀಟ್ ಅಡ್ಡೆಗೆ ವಿಟ್ಲ ಪೊಲೀಸರ ದಾಳಿ : ನಾಲ್ವರು ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ - Karavali Times

728x90

11 March 2024

ಇಸ್ಪೀಟ್ ಅಡ್ಡೆಗೆ ವಿಟ್ಲ ಪೊಲೀಸರ ದಾಳಿ : ನಾಲ್ವರು ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ

ಬಂಟ್ವಾಳ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಇಸ್ಪೀಟ್ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. 

ಬಂಧಿತ ಆರೋಪಿಗಳನ್ನು ಧರ್ಮರಾಜ್, ಗೋಪಾಲ ಅಲಿಯಾಸ್ ಚಂದ್ರಶೇಖರ, ವಲಿತ್ ಕೆ ಹಾಗೂ ಕಲಂದರ್ ಶಾಫಿ ಎಂದು ಹೆಸರಿಸಲಾಗಿದೆ. 

ವಿಟ್ಲ ಕಸಬ ಗ್ರಾಮದ, ನೆಕ್ಕರೆ ಕಾಡು ಎಂಬಲ್ಲಿನ ಕಲ್ಲಿನ ಕೋರೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೆÇಲೀಸ್ ಠಾಣಾ ಪಿಎಸ್ಸೈ ವಿಧ್ಯಾ ಕೆ ಜೆ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. 

ದಾಳಿ ವೇಳೆ ಆರೋಪಿಗಳ ಸಹಿತ 1550/- ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಇಸ್ಪೀಟ್ ಅಡ್ಡೆಗೆ ವಿಟ್ಲ ಪೊಲೀಸರ ದಾಳಿ : ನಾಲ್ವರು ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ Rating: 5 Reviewed By: karavali Times
Scroll to Top