ಪುತ್ತೂರು : ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ತಗಾದೆ ಎತ್ತಿ ಅಟೋ ಚಾಲಕಗೆ ತಂಡದಿಂದ ಹಲ್ಲೆ - Karavali Times ಪುತ್ತೂರು : ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ತಗಾದೆ ಎತ್ತಿ ಅಟೋ ಚಾಲಕಗೆ ತಂಡದಿಂದ ಹಲ್ಲೆ - Karavali Times

728x90

11 March 2024

ಪುತ್ತೂರು : ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ತಗಾದೆ ಎತ್ತಿ ಅಟೋ ಚಾಲಕಗೆ ತಂಡದಿಂದ ಹಲ್ಲೆ

ಪುತ್ತೂರು, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಪೊಂದು ಅಟೋ ಚಾಲಕಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ಪಡವ್ನನೂರು ಗ್ರಾಮದ ಕೆಳಗಿನ ಕನ್ನಡ್ಕ ಬಸ್ ನಿಲ್ದಾಣ ಬಳಿ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.

ಹಲ್ಲೆಗೊಳಗಾದ ಅಟೋ ರಿಕ್ಷಾ ಚಾಲಕನನ್ನು ಪುತ್ತೂರು ನಿವಾಸಿ ನಾಗೇಶ (34) ಎಂದು ಹೆಸರಿಸಲಾಗಿದೆ. ಇವರು ಸೋಮವಾರ ಬೆಳಗ್ಗಿನ ಜಾವ ತನ್ನ ಅಟೋ ರಿಕ್ಷಾದಲ್ಲಿ ಪ್ರಯಾಣಿಕರೋರ್ವರನ್ನು ಕುಳ್ಳಿರಿಸಿಕೊಂಡು, ಪುತ್ತೂರು ತಾಲೂಕು ಪಡವನ್ನೂರು ಗ್ರಾಮದ ಕೆಳಗಿನ ಕನ್ನಡ್ಕ ಬಸ್ ನಿಲ್ದಾಣ ಬಳಿ ತಲುಪಿದಾಗ ಆರೋಪಿಗಳಾದ ದಯಾನಂದ, ಅಚ್ಚುತ ಹಾಗೂ ಇಬ್ಬರು ಅಪರಿಚಿತರು ಆಟೋ ಬಳಿ ಬಂದು, ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2024 ಕಲಂ 1860 ಐಪಿಸಿ ಸೆಕ್ಷನ್ 324, 506 ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ತಗಾದೆ ಎತ್ತಿ ಅಟೋ ಚಾಲಕಗೆ ತಂಡದಿಂದ ಹಲ್ಲೆ Rating: 5 Reviewed By: karavali Times
Scroll to Top