ಕೆಮ್ಮಾರ : ಅಕ್ರಮ ಜಾನುವಾರು ವಧೆ ನಡೆಸುತ್ತಿದ್ದ ಮನೆಗೆ ಕಡಬ ಪೊಲೀಸರ ದಾಳಿ, ಓರ್ವ ವಶಕ್ಕೆ, ಇನ್ನೋರ್ವ ಪರಾರಿ - Karavali Times ಕೆಮ್ಮಾರ : ಅಕ್ರಮ ಜಾನುವಾರು ವಧೆ ನಡೆಸುತ್ತಿದ್ದ ಮನೆಗೆ ಕಡಬ ಪೊಲೀಸರ ದಾಳಿ, ಓರ್ವ ವಶಕ್ಕೆ, ಇನ್ನೋರ್ವ ಪರಾರಿ - Karavali Times

728x90

29 March 2024

ಕೆಮ್ಮಾರ : ಅಕ್ರಮ ಜಾನುವಾರು ವಧೆ ನಡೆಸುತ್ತಿದ್ದ ಮನೆಗೆ ಕಡಬ ಪೊಲೀಸರ ದಾಳಿ, ಓರ್ವ ವಶಕ್ಕೆ, ಇನ್ನೋರ್ವ ಪರಾರಿ

ಕಡಬ, ಮಾರ್ಚ್ 29, 2024 (ಕರಾವಳಿ ಟೈಮ್ಸ್) : ಮನೆಯಲ್ಲಿ ಅಕ್ರಮವಾಗಿ ಜಾನುವಾರು ವಧೆ ಮಾಡಿ ಮಾಂಸ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಕಡಬ ಪೊಲೀಸರು ಮಾಂಸ ಸಹಿತ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಕೊಯಿಲ ಗ್ರಾಮದ ಕೆಮ್ಮಾರ್-ಆಕಿರ ಎಂಬಲ್ಲಿ ಗುರುವಾರ ನಡೆದಿದೆ. ದಾಳಿ ವೇಳೆ ಇನ್ನೋರ್ವ ಆರೋಪಿ ಪೊಲೀಸರಿಗೆ ಕೈಗೆ ಸಿಗದೆ ಪರಾರಿಯಾಗಿದ್ದಾನೆ. 

ಬಂಧಿತ ಆರೋಪಿಯನ್ನು ಕಡಬ ತಾಲೂಕು ಕೊಯಿಲಾ ಗ್ರಾಮದ ಕೆಮ್ಮಾರ ಆಕೀರ ನಿವಾಸಿ ಇಲ್ಯಾಸ್ ಎಂದು ಹೆಸರಿಸಲಾಗಿದ್ದು, ಪರಾರಿಯಾದ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ಕಲ್ಲೇರಿ ಗ್ರಾಮದ ನಿವಾಸಿ ಮಹಮ್ಮದ್ ಆಮು ಎಂದು ಗುರುತಿಸಲಾಗಿದೆ. 

ಇಲ್ಯಾಸ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕಡಬ ಪೆÇಲೀಸ್ ಠಾಣಾ ಪಿಎಸ್ಸೈ ಅಭಿನಂಧನ್ ಎಂ ಎಸ್ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ಈ ಸಂದರ್ಭ ಇಲ್ಯಾಸ್ ಹಾಗೂ ಮುಹಮ್ಮದ್ ಆಮು ಎಂಬವರು ಸೇರಿಕೊಂಡು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರುಗಳ ವಧೆ ಮಾಡುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಜಾನುವಾರುಗಳ ಮಾಂಸ, ತ್ಯಾಜ್ಯ ಹಾಗೂ ಜಾನುವಾರು ವಧೆಗೆ ಬಳಸಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2024. ಕಲಂ 4, 7, 12 ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕೆಮ್ಮಾರ : ಅಕ್ರಮ ಜಾನುವಾರು ವಧೆ ನಡೆಸುತ್ತಿದ್ದ ಮನೆಗೆ ಕಡಬ ಪೊಲೀಸರ ದಾಳಿ, ಓರ್ವ ವಶಕ್ಕೆ, ಇನ್ನೋರ್ವ ಪರಾರಿ Rating: 5 Reviewed By: karavali Times
Scroll to Top