ಬಂಟ್ವಾಳ : ಬೈಕುಗಳ ನಡುವೆ ಅಪಘಾತದಿಂದ ಓರ್ವಗೆ ಗಾಯ - Karavali Times ಬಂಟ್ವಾಳ : ಬೈಕುಗಳ ನಡುವೆ ಅಪಘಾತದಿಂದ ಓರ್ವಗೆ ಗಾಯ - Karavali Times

728x90

4 April 2024

ಬಂಟ್ವಾಳ : ಬೈಕುಗಳ ನಡುವೆ ಅಪಘಾತದಿಂದ ಓರ್ವಗೆ ಗಾಯ

ಬಂಟ್ವಾಳ, ಎಪ್ರಿಲ್ 04, 2024 (ಕರಾವಳಿ ಟೈಮ್ಸ್) : ಬೈಕೊಂದು ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಬಿ ಮೂಡ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ಸಂಭವಿಸಿದೆ. 

ಅಪಘಾತದಿಂದ ಬೈಕ್ ಸಹಸವಾರ ಜಯಾನಂದ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಲಾತಬೆಟ್ಟು ನಿವಾಸಿ ಪ್ರವೀಣ್ ಕುಮಾರ್ ಎಂಬವರು ಜಯಾನಂದ ಅವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಭಂಡಾರಿಬೆಟ್ಟು ಎಂಬಲ್ಲಿ ಇನ್ನೊಂದು ಬೈಕಿನ ಸವಾರ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾನೆ. ಅಪಘಾತದಿಂದ ಸಹಸವಾರ ಜಯಾನಂದ ಅವರು ಗಾಯಗೊಂಡಿದ್ದು ಅವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಬೈಕುಗಳ ನಡುವೆ ಅಪಘಾತದಿಂದ ಓರ್ವಗೆ ಗಾಯ Rating: 5 Reviewed By: karavali Times
Scroll to Top