ಶರಾಬು ಕುಡಿಯಲು ಕರೆದುದಕ್ಕೆ ಆಕ್ಷೇಪಿಸಿದ್ದಕ್ಕೆ ತಂದೆ-ಮಗನಿಗೆ ಹಲ್ಲೆ ನಡೆಸಿದ ಆರೋಪಿ - Karavali Times ಶರಾಬು ಕುಡಿಯಲು ಕರೆದುದಕ್ಕೆ ಆಕ್ಷೇಪಿಸಿದ್ದಕ್ಕೆ ತಂದೆ-ಮಗನಿಗೆ ಹಲ್ಲೆ ನಡೆಸಿದ ಆರೋಪಿ - Karavali Times

728x90

12 April 2024

ಶರಾಬು ಕುಡಿಯಲು ಕರೆದುದಕ್ಕೆ ಆಕ್ಷೇಪಿಸಿದ್ದಕ್ಕೆ ತಂದೆ-ಮಗನಿಗೆ ಹಲ್ಲೆ ನಡೆಸಿದ ಆರೋಪಿ

 ಬೆಳ್ತಂಗಡಿ, ಎಪ್ರಿಲ್ 12, 2024 (ಕರಾವಳಿ ಟೈಮ್ಸ್) : ಶರಾಬು ಕುಡಿಯಲು ಕರೆದದ್ದಕ್ಕೆ ತಿರಸ್ಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬರು ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ-ಮಗನಿಗೆ ಹಲ್ಲೆ ನಡೆಸಿದ ಘಟನೆ ಮಚ್ಚಿನ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. 

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿರುವ ಸದ್ಗುರು ಹೋಟೆಲಿನ ಕ್ಯಾಶಿಯರ್ ಪ್ರತಿಭಾ ಬಿ ರೈ ಅವರು, ಗುರುವಾರ ಸಂಜೆ ಹೋಟೆಲಿನಲ್ಲಿ ಕೆಲಸದಲ್ಲಿದ್ದ ವೇಳೆ ಆರೋಪಿ ಕೇಶವ ಪೂಜಾರಿ ಎಂಬಾತನು ಹೋಟೆಲಿನ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು, ಹೋಟೆಲಿನಲ್ಲಿ ಕೆಲಸ ಮಾಡುವ ಚಂದ್ರ ಎಂಬವರನ್ನು ಶರಾಬು ಕುಡಿಯಲು ಕರೆದಿರುತ್ತಾನೆ. ಈ ಸಂದರ್ಭ ಚಂದ್ರ ಅವರು ಆಕ್ಷೇಪಿಸಿದಾಗ, ಆರೋಪಿಯು ಅವಾಚ್ಯ ಶಬ್ದದಿಂದ ಬೈದಿರುತ್ತಾನೆ. .ಈ ವೇಳೆ ಚಂದ್ರ ಅವರ ಮಗ ಹೃತಿಕ್ ರೈ ಆರೋಪಿತನ ಬಳಿ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಬೈಯ್ಯಬಾರದು ಎಂದು ತಿಳಿ ಹೇಳಿ ಬರುತ್ತಿದ್ದಂತೆ, ಆರೋಪಿಯು ಹೃತಿಕ್ ಗೆ ಹಲ್ಲೆ ನಡೆಸಿರುತ್ತಾನೆ. ಗಲಾಟೆ ಬಿಡಿಸಲು ಬಳಿ ಬಂದ ಹೋಟೆಲಿನ ಕೆಲಸದಾಳು ಚಂದ್ರ ಅವರಿಗೂ ಆರೋಪಿ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2024 ಕಲಂ 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶವ ಪೂಜಾರಿ ಅವರು ಹೃತಿಕ್ ರೈ ಹಾಗೂ ಚಂದ್ರರವರ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರತಿದೂರು ನೀಡಿದ್ದು, ಅಪರಾಧ ಕ್ರಮಾಂಕ 29/2024 ಕಲಂ 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಶರಾಬು ಕುಡಿಯಲು ಕರೆದುದಕ್ಕೆ ಆಕ್ಷೇಪಿಸಿದ್ದಕ್ಕೆ ತಂದೆ-ಮಗನಿಗೆ ಹಲ್ಲೆ ನಡೆಸಿದ ಆರೋಪಿ Rating: 5 Reviewed By: karavali Times
Scroll to Top