ತಣ್ಣೀರುಪಂಥ : ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಎಗರಿಸಿದ ಕಳ್ಳರು - Karavali Times ತಣ್ಣೀರುಪಂಥ : ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಎಗರಿಸಿದ ಕಳ್ಳರು - Karavali Times

728x90

4 April 2024

ತಣ್ಣೀರುಪಂಥ : ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಎಗರಿಸಿದ ಕಳ್ಳರು

ಬಂಟ್ವಾಳ, ಎಪ್ರಿಲ್ 04, 2024 (ಕರಾವಳಿ ಟೈಮ್ಸ್) : ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಕಳವುಗೈದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಗ್ರಾಮದಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಅಬ್ದುಲ್ ಹಕೀಂ ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಹಕೀಂ ಅವರು ತನ್ನ ಮನೆಯೆ ಹಿಂಭಾಗದಲ್ಲಿನ ಅಡಿಕೆ ಸಂಗ್ರಹದ ಗೋಡೌನಿನಲ್ಲಿ ಎ 2 ರಂದು ಸಂಜೆ 75 ಗೋಣಿ ಚೀಲ ಒಣಗಿಸಿದ ಸುಲಿಯದ ಅಡಿಕೆಗಳನ್ನು ಸಂಗ್ರಹಿಸಿಟ್ಟಿದ್ದು, ಎ 3 ರಂದು ಬೆಳಿಗ್ಗಿನ ಜಾವ ಗೋಡೌನಿನ ಬಾಗಿಲು ತುಂಡಾಗಿ ಬೀಗ ಮುರಿದ ರೀತಿಯಲ್ಲಿ ಕಂಡು ಬಂದಿದ್ದು, ಪರಿಶೀಲನೆ ನಡೆಸಿದಾಗ ಗೋಡೌನಿನಲ್ಲಿದ್ದ 25 ಗೋಣಿ ಚೀಲ ಅಡಿಕೆಯನ್ನು ಯಾರೋ ಕಳ್ಳರು ಕಳವುಗೈದಿರುವುದು ಬೆಳಕಿಗೆ ಬಂದಿದೆ. 

25 ಗೋಣಿ ಚೀಲದಲ್ಲಿದ್ದ ತಲಾ 18 ಕೆಜಿಯಂತೆ ಒಟ್ಟು 450 ಕೆಜಿ ಸುಲಿಯದ ಅಡಿಕೆ ಕಳವಾಗಿದ್ದು, ಕಳವಾಗಿರುವ ಅಡಿಕೆಗಳ ಒಟ್ಟು ಮೌಲ್ಯ 1.35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಕೀಂ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ತಣ್ಣೀರುಪಂಥ : ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಎಗರಿಸಿದ ಕಳ್ಳರು Rating: 5 Reviewed By: karavali Times
Scroll to Top