ಸಂಸದರ ವಿನಂತಿ ಮೇರೆಗೆ ಬೆಳ್ತಂಗಡಿ ಶಾಸಕರನ್ನು ಬಂಧಿಸದೆ ಬಿಟ್ಟು ಬಂದ ಪೊಲೀಸರು : ರಾತ್ರಿ ವೇಳೆ ನಾಯಕರೊಂದಿಗೆ ಠಾಣೆಗೆ ಹಾಜರಾದ ಹರೀಶ್ ಪೂಂಜಾ, ಪೊಲೀಸರಿಂದ ವಿಚಾರಣೆ - Karavali Times ಸಂಸದರ ವಿನಂತಿ ಮೇರೆಗೆ ಬೆಳ್ತಂಗಡಿ ಶಾಸಕರನ್ನು ಬಂಧಿಸದೆ ಬಿಟ್ಟು ಬಂದ ಪೊಲೀಸರು : ರಾತ್ರಿ ವೇಳೆ ನಾಯಕರೊಂದಿಗೆ ಠಾಣೆಗೆ ಹಾಜರಾದ ಹರೀಶ್ ಪೂಂಜಾ, ಪೊಲೀಸರಿಂದ ವಿಚಾರಣೆ - Karavali Times

728x90

22 May 2024

ಸಂಸದರ ವಿನಂತಿ ಮೇರೆಗೆ ಬೆಳ್ತಂಗಡಿ ಶಾಸಕರನ್ನು ಬಂಧಿಸದೆ ಬಿಟ್ಟು ಬಂದ ಪೊಲೀಸರು : ರಾತ್ರಿ ವೇಳೆ ನಾಯಕರೊಂದಿಗೆ ಠಾಣೆಗೆ ಹಾಜರಾದ ಹರೀಶ್ ಪೂಂಜಾ, ಪೊಲೀಸರಿಂದ ವಿಚಾರಣೆ

ಬೆಳ್ತಂಗಡಿ, ಮೇ 22, 2024 (ಕರಾವಳಿ ಟೈಮ್ಸ್) : ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಪಿತ ಶಾಸಕ ಹರೀಶ್ ಪೂಂಜರನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲು ಬೆಳ್ತಂಗಡಿ ಠಾಣಾ ಪೊಲೀಸರು ಶಾಸಕರ ಮನೆಗೆ ಬುಧವಾರ ತೆರಳಿರುತ್ತಾರೆ. ಈ ವೇಳೆ  ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ತಾನೇ ಖುದ್ದಾಗಿ ಹರೀಶ್ ಪೂಂಜಾ ಅವರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿರುತ್ತಾರೆ ಹಾಗೂ ಅದರಂತೆ ಸಂಸದರು ಆರೋಪಿತ ಹರೀಶ್ ಪೂಂಜಾ ಅವರನ್ನು ಪೊಲೀಸರೊಂದಿಗೆ ಠಾಣೆಗೆ ಕಳುಹಿಸಿರುತ್ತಾರೆ. ಪ್ರಸ್ತುತ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜಾ ಅವರ ವಿಚಾರಣೆ ನಡೆಸಲಾಗಿದ್ದು, ಬೆಳ್ತಂಗಡಿ ಠಾಣಾ ಅಪರಾಧ ಕ್ರಮಾಂಕ 58/2024, ಕಲಂ 143, 147, 341, 504, 506 ಜೊತೆಗೆ 149 ಐಪಿಸಿಯಂತೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  

  • Blogger Comments
  • Facebook Comments

0 comments:

Post a Comment

Item Reviewed: ಸಂಸದರ ವಿನಂತಿ ಮೇರೆಗೆ ಬೆಳ್ತಂಗಡಿ ಶಾಸಕರನ್ನು ಬಂಧಿಸದೆ ಬಿಟ್ಟು ಬಂದ ಪೊಲೀಸರು : ರಾತ್ರಿ ವೇಳೆ ನಾಯಕರೊಂದಿಗೆ ಠಾಣೆಗೆ ಹಾಜರಾದ ಹರೀಶ್ ಪೂಂಜಾ, ಪೊಲೀಸರಿಂದ ವಿಚಾರಣೆ Rating: 5 Reviewed By: karavali Times
Scroll to Top