ಬಂಟ್ವಾಳದಲ್ಲಿ ಮಳೆ ಬಿರುಸು : ಪರ್ಲೊಟ್ಟು ಹೆದ್ದಾರಿಯಲ್ಲಿ ಕಾರಿಗೆ ಮರ ಬಿದ್ದು ಹಾನಿ, ಕುರಿಯಾಳದಲ್ಲಿ ನೆಲಕ್ಕೆ ವಾಲಿದ ವಿದ್ಯುತ್ ಕಂಬ - Karavali Times ಬಂಟ್ವಾಳದಲ್ಲಿ ಮಳೆ ಬಿರುಸು : ಪರ್ಲೊಟ್ಟು ಹೆದ್ದಾರಿಯಲ್ಲಿ ಕಾರಿಗೆ ಮರ ಬಿದ್ದು ಹಾನಿ, ಕುರಿಯಾಳದಲ್ಲಿ ನೆಲಕ್ಕೆ ವಾಲಿದ ವಿದ್ಯುತ್ ಕಂಬ - Karavali Times

728x90

21 May 2024

ಬಂಟ್ವಾಳದಲ್ಲಿ ಮಳೆ ಬಿರುಸು : ಪರ್ಲೊಟ್ಟು ಹೆದ್ದಾರಿಯಲ್ಲಿ ಕಾರಿಗೆ ಮರ ಬಿದ್ದು ಹಾನಿ, ಕುರಿಯಾಳದಲ್ಲಿ ನೆಲಕ್ಕೆ ವಾಲಿದ ವಿದ್ಯುತ್ ಕಂಬ

ಬಂಟ್ವಾಳ, ಮೇ 21, 2024 (ಕರಾವಳಿ ಟೈಮ್ಸ್) : ನೆಟ್ಲ ಮುಡ್ನೂರು ಗ್ರಾಮದ ಪರ್ಲೊಟ್ಟು ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಾರಿಗೆ ಮರ ಬಿದ್ದು ವಾಹನ ಚಾಲಕರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಮಂಗಳೂರು ಮೂಲದ ನಾಲ್ವರು ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮರವನ್ನು ತೆರವುಗೊಳಿಸಲಾಗಿದ್ದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಕುರಿಯಾಳ ಗ್ರಾಮದ ದೊಂಪದ ಬಳಿ ಎಂಬಲ್ಲಿ ಗಾಳಿ ಮಳೆಗೆ ಲೈಟ್ ಕಂಬವು ಬಿದ್ದಿರುತ್ತದೆ. ಈ ಬಗ್ಗೆ ಮೆಸ್ಕಾಂ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆ ಬಿರುಸು : ಪರ್ಲೊಟ್ಟು ಹೆದ್ದಾರಿಯಲ್ಲಿ ಕಾರಿಗೆ ಮರ ಬಿದ್ದು ಹಾನಿ, ಕುರಿಯಾಳದಲ್ಲಿ ನೆಲಕ್ಕೆ ವಾಲಿದ ವಿದ್ಯುತ್ ಕಂಬ Rating: 5 Reviewed By: karavali Times
Scroll to Top