ಪಾಣೆಮಂಗಳೂರು : ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ, ಸ್ಕೂಟರ್ ಸವಾರ ದಾರುಣ ಸಾವು - Karavali Times ಪಾಣೆಮಂಗಳೂರು : ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ, ಸ್ಕೂಟರ್ ಸವಾರ ದಾರುಣ ಸಾವು - Karavali Times

728x90

2 May 2024

ಪಾಣೆಮಂಗಳೂರು : ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ, ಸ್ಕೂಟರ್ ಸವಾರ ದಾರುಣ ಸಾವು

 ಬಂಟ್ವಾಳ, ಮೇ 02, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆಯ ಮೇಲೆ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. 

ಮೃತ ಸ್ಕೂಟರ್ ಸವಾರನನ್ನು ನರಿಕೊಂಬು ಗ್ರಾಮದ ಪೊಯಿತಾಜೆ ನಿವಾಸಿ ಸುಬ್ಬು ಭಂಡಾರಿ (68) ಎಂದು ಹೆಸರಿಸಲಾಗಿದೆ.  ಭಂಡಾರಿ ಅವರು ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ನೇತ್ರಾವತಿ ಸೇತುವೆ ಮೇಲೆ ಬದ್ರುಲ್ ಮುನೀರ್ ಎಂಬವರು ಚಲಾಯಿಸಿಕೊಂಡು ಬಂದ  ಟಿಪ್ಪರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಸುಬ್ಬ ಭಂಡಾರಿ ಅವರನ್ನು ತಕ್ಷಣ ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು. ಮೃತರ ಸಂಬಂಧಿ ರಂಜಿತ್ ಕುಮಾರ್ ಎಂಬವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ, ಸ್ಕೂಟರ್ ಸವಾರ ದಾರುಣ ಸಾವು Rating: 5 Reviewed By: lk
Scroll to Top