ಬಡವರ, ದೀನ ದಲಿತರ ಕಣ್ಣೀರೊರೆಸುವ ಇಚ್ಛಾ ಶಕ್ತಿ ಹೊಂದಿದ್ದ ನಾಯಕ ವಸಂತ ಬಂಗೇರ : ರಮಾನಾಥ ರೈ ತೀವ್ರ ಸಂತಾಪ - Karavali Times ಬಡವರ, ದೀನ ದಲಿತರ ಕಣ್ಣೀರೊರೆಸುವ ಇಚ್ಛಾ ಶಕ್ತಿ ಹೊಂದಿದ್ದ ನಾಯಕ ವಸಂತ ಬಂಗೇರ : ರಮಾನಾಥ ರೈ ತೀವ್ರ ಸಂತಾಪ - Karavali Times

728x90

8 May 2024

ಬಡವರ, ದೀನ ದಲಿತರ ಕಣ್ಣೀರೊರೆಸುವ ಇಚ್ಛಾ ಶಕ್ತಿ ಹೊಂದಿದ್ದ ನಾಯಕ ವಸಂತ ಬಂಗೇರ : ರಮಾನಾಥ ರೈ ತೀವ್ರ ಸಂತಾಪ

ಬಂಟ್ವಾಳ, ಮೇ 08, 2024 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಕೆ ವಸಂತ ಬಂಗೇರ ಅವರ ನಿಧನಕ್ಕೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರು ತೀವ್ರ ಸಂತಾಪ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ. 

ಬೆಳ್ತಂಗಡಿ ಕ್ಷೇತ್ರದ ಅಭಿವೃದ್ದಿಗೆ ಪಣತೊಟ್ಟು ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಬಡವರ ಹಾಗೂ ದೀನ ದಲಿತರ ಕಣ್ಣೀರೊರೆಸುವ ಇಚ್ಛಾ ಶಕ್ತಿ ಹೊಂದಿರುವಂತಹ ನನ್ನ ಆತ್ಮೀಯ ಸ್ನೇಹಿತರಾದ ಶ್ರೀ ವಸಂತ ಬಂಗೇರ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ತಿಳಿದು ನಾನು ದುಃಖಭರಿತನಾಗಿದ್ದೇನೆ. 

ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ರಮಾನಾಥ ರೈ ಅವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಡವರ, ದೀನ ದಲಿತರ ಕಣ್ಣೀರೊರೆಸುವ ಇಚ್ಛಾ ಶಕ್ತಿ ಹೊಂದಿದ್ದ ನಾಯಕ ವಸಂತ ಬಂಗೇರ : ರಮಾನಾಥ ರೈ ತೀವ್ರ ಸಂತಾಪ Rating: 5 Reviewed By: karavali Times
Scroll to Top