ಭ್ರಷ್ಟಾಚಾರ ರಹಿತ, ಕಳಂಕ ರಹಿತ ರಾಜಕಾರಣಿ ವಸಂತ ಬಂಗೇರ ನಿಧನಕ್ಕೆ ದಕ್ಷಿಣ ಕನ್ನಡ ಕಾಂಗ್ರೆಸ್ ನಾಯಕರಿಂದ ದಿಗ್ಭ್ರಮೆ, ತೀವ್ರ ಸಂತಾಪ - Karavali Times ಭ್ರಷ್ಟಾಚಾರ ರಹಿತ, ಕಳಂಕ ರಹಿತ ರಾಜಕಾರಣಿ ವಸಂತ ಬಂಗೇರ ನಿಧನಕ್ಕೆ ದಕ್ಷಿಣ ಕನ್ನಡ ಕಾಂಗ್ರೆಸ್ ನಾಯಕರಿಂದ ದಿಗ್ಭ್ರಮೆ, ತೀವ್ರ ಸಂತಾಪ - Karavali Times

728x90

8 May 2024

ಭ್ರಷ್ಟಾಚಾರ ರಹಿತ, ಕಳಂಕ ರಹಿತ ರಾಜಕಾರಣಿ ವಸಂತ ಬಂಗೇರ ನಿಧನಕ್ಕೆ ದಕ್ಷಿಣ ಕನ್ನಡ ಕಾಂಗ್ರೆಸ್ ನಾಯಕರಿಂದ ದಿಗ್ಭ್ರಮೆ, ತೀವ್ರ ಸಂತಾಪ

ಮಂಗಳೂರು, ಮೇ 08, 2024 (ಕರಾವಳಿ ಟೈಮ್ಸ್) : ದ.ಕ. ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ. ವಸಂತ ಬಂಗೇರಾ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. 

ಮೂರು ದಶಕಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿರುವ ವಸಂತ ಬಂಗೇರಾ ಅವರು ಕರಾವಳಿ ಭಾಗದ ಓರ್ವ ನೇರ ನುಡಿಯ ನಿಷ್ಠಾವಂತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಬಡವರ, ಹಿಂದುಳಿದ ವರ್ಗಗಳ  ಪರ ಗಟ್ಟಿ ಧ್ವನಿಯಾಗಿ ಹೋರಾಡಿ ಬಂದವರು. ರಾಜ್ಯದ ಭ್ರಷ್ಟಾಚಾರ ರಹಿತ ನಾಯಕರಾಗಿದ್ದ ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ರಾಜಕೀಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾಯಕರು ಪ್ರಾರ್ಥಿಸಿದ್ದಾರೆ. 

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ, ಮಾಜಿ ರಾಜ್ಯಸಭಾ ಸದಸ್ಯ ಬಿ ಇಬ್ರಾಹೀಂ, ಮಾಜಿ ಸಚಿವ ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಎನ್.ಎಂ. ಅಡ್ಯಂತಾಯ, ಮೊಹಮ್ಮದ್ ಮಸೂದ್, ಶಕುಂತಲಾ ಶೆಟ್ಟಿ, ಜೆ.ಆರ್. ಲೋಬೊ, ಐವನ್ ಡಿ ಸೋಜಾ, ಎಐಸಿಸಿ ಕಾರ್ಯದರ್ಶಿ ವಿ.ಪಿ. ಮೋಹನ್, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಕೆಪಿಸಿಸಿ ಪದಾಧಿಕಾರಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ, ಜಿ. ಕೃಷ್ಣಪ್ಪ, ಇನಾಯತ್ ಅಲಿ, ಎಂ.ಎಸ್. ಮೊಹಮ್ಮದ್, ಜಿ.ಎ. ಬಾವಾ, ಟಿ.ಎಂ. ಶಹೀದ್, ಲಾವಣ್ಯ ಬಳ್ಳಾಲ್, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಮುಖರಾದ ಹಾಜಿ ಬಿ.ಎಚ್. ಖಾದರ್, ಹಾಜಿ ಯು.ಕೆ. ಮೋನು, ರಾಕೇಶ್ ಮಲ್ಲಿ, ಡಾ. ರಘು ಸಳ್ಯ, ಸುರೇಶ್ ಬಳ್ಳಾಲ್, ಇಬ್ರಾಹೀಂ ಕೋಡಿಜಾಲ್, ಎಂ ಅಶ್ವನಿ ಕುಮಾರ್ ರೈ, ಶಶಿಧರ್ ಹೆಗ್ಡೆ,  ಕೆ. ಅಶ್ರಫ್, ಸದಾಶಿವ್ ಉಳ್ಳಾಲ್, ಧರಣೇಂದ್ರ ಕುಮಾರ್, ಮಹಾಬಲ ಮಾರ್ಲ, ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಕೆ.ಪಿ. ಥೋಮಸ್, ಮಹಮ್ಮದ್ ಬಡಗನ್ನೂರ್, ರಂಜನ್ ಗೌಡ, ಶೈಲೇಶ್ ಕುಮಾರ್, ಮಮತಾ ಗಟ್ಟಿ, ಸತೀಶ್ ಬಂಗೇರ, ನಾಗೇಶ್ ಕುಮಾರ್ ಗೌಡ, ವೆಲೇರಿಯನ್ ಸಿಕ್ವೇರ, ಮೋಹನ್ ಕೋಟ್ಯಾನ್, ಪುರುಷೋತ್ತಮ ಚಿತ್ರಾಪುರ, ಸುರೇಂದ್ರ ಕಂಬ್ಳಿ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ ಬೋಳಿಯಾರ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಎಂ.ಬಿ ವಿಶ್ವನಾಥ ರೈ, ಡಾ. ರಾಜಾರಾಂ, ಪಿ.ಸಿ. ಜಯರಾಂ, ಸುಧೀರ್ ಕುಮಾರ್ ಶೆಟ್ಟಿ, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ಜೋಕಿಂ ಡಿಸೋಜ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶೇಖರ್ ಕುಕ್ಕೇಡಿ, ಮನೋಹರ್ ಶೆಟ್ಟಿ, ನಾರಾಯಣ್ ನಾಯ್ಕ್, ಮೋಹನ್ ಗೌಡ, ಮನೋರಾಜ್ ರಾಜೀವ, ಲಾರೆನ್ಸ್ ಡಿಸೋಜ, ಅಲಿಸ್ಟರ್,  ಡಾ. ಶೇಖರ್ ಪೂಜಾರಿ, ಶುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು, ಉಲ್ಲಾಸ್ ಕೋಟ್ಯಾನ್, ಚೇತನ್ ಬೆಂಗ್ರೆ, ಬಿ.ಎಂ. ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಕೌಶಲ್ ಪ್ರಸಾದ್ ಶೆಟ್ಟಿ, ಸುಹಾನ್ ಆಳ್ವ, ಪೂರ್ಣೇಶ್ ಭಂಡಾರಿ, ಸದಸ್ಯರಾದ  ಪ್ರವೀಣ್ ಚಂದ್ರ ಆಳ್ವ, ಲ್ಯಾನ್ಸ್ ಲೋಟೊ ಪಿಂಟೊ, ಭಾಸ್ಕರ್ ಕೆ, ಅಬ್ದುಲ್ ರವೂಫ್, ಕೇಶವ ಮರೋಳಿ, ಜೆಸಿಂತಾ, ಎ.ಸಿ. ವಿನಯರಾಜ್, ಸಂಶುದ್ದೀನ್ ಕುದ್ರೋಳಿ, ಲತೀಫ್ ಕಂದಕ್, ನವೀನ್ ಡಿ ಸೋಜ, ಅಶ್ರಫ್ ಬಜಾಲ್, ಅನಿಲ್ ಕುಮಾರ್, ಝೀನತ್ ಸಂಶುದ್ದೀನ್ ಬಂದರ್, ಭರತ್ ಮುಂಡೋಡಿ, ಮೋಹನ್ ಶೆಟ್ಟಿಗಾರ್, ಕೇಶವ್ ಗೌಡ, ಚಂದ್ರಹಾಸ ಸನಿಲ್, ವಸಂತ್ ಬೆರ್ನಾಡ್, ಸದಾಶಿವ ಶೆಟ್ಟಿ, ಆರ್.ಕೆ. ಪೃಥ್ವಿರಾಜ್, ಎಸ್. ಅಪ್ಪಿ, ಸತೀಶ್ ಕುಮಾರ್ ಕೆಡಿಂಜೆ, ನೀರಜ್ ಚಂದ್ರಪಾಲ್, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಗರೀಶ್ ಆಳ್ವ, ಏರ್ ಪೆÇೀರ್ಟ್ ಖಾದರ್, ಅಭಿನಂದನ್ ಹರೀಶ್ ಕುಮಾರ್, ಫಾರೂಕ್ ಉಳ್ಳಾಲ್, ಸದಾಶಿವ ಬಂಗೇರ, ಯೂಸುಫ್ ಕರಂದಾಡಿ, ರಝಾಕ್ ಕುಕ್ಕಾಜೆ, ಶಬೀರ್ ಎಸ್, ಶರೀಫ್ ಭೂಯಾ ಮೊದಲಾದವರು ತೀವ್ರ ಸಂಪಾತ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಭ್ರಷ್ಟಾಚಾರ ರಹಿತ, ಕಳಂಕ ರಹಿತ ರಾಜಕಾರಣಿ ವಸಂತ ಬಂಗೇರ ನಿಧನಕ್ಕೆ ದಕ್ಷಿಣ ಕನ್ನಡ ಕಾಂಗ್ರೆಸ್ ನಾಯಕರಿಂದ ದಿಗ್ಭ್ರಮೆ, ತೀವ್ರ ಸಂತಾಪ Rating: 5 Reviewed By: karavali Times
Scroll to Top