ಬಂಟ್ವಾಳ, ಎಪ್ರಿಲ್ 22, 2025 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಕೆಲವೆಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ಪಾಣೆಮಂಗಳೂರು ಗ್ರಾಮದ ಹಾಮದ್ ಬಾವ, ಉಸ್ಮಾನ್, ಶೇಖಬ್ಬ ಎಂಬವರ ವಾಸ್ತವ್ಯದ ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ನಿವಾಸಿ ವಸಂತಿ ಕೋಂ ಮೋನಪ್ಪ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಆಂಶಿಕ ಹಾನಿ ಸಂಭವಿಸಿದೆ. ಇಲ್ಲಿನ ನಿವಾಸಿ ಗಿರಿಧರ್ ಕಾಮತ್ ಎಂಬವರ ರೈಸ್ ಮಿಲ್ಲಿನ ಹಂಚು ಛಾವಣಿಗೆ ಹಾನಿ ಸಂಭವಿಸಿದೆ.
ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ಕುಲ್ಸುಂಬಿ ಅವರ ವಾಸದ ಮನೆಯ ಹಿಂಬದಿಯ ಗೋಡೆಗೆ ಅಳವಡಿಸಲಾಗಿದ್ದ ಸುಮಾರು 12 ಶೀಟುಗಳಿಗೆ ಹಾನಿ ಸಂಭವಿಸಿದೆ. ಕೊಟ್ಟುಂಜ ನಿವಾಸಿ ಪ್ರವೀಣ್ ಆಳ್ವ ಅವರ ತೋಟದಲ್ಲಿದ್ದ ಮರವೊಂದು ಅಡಿಕೆ ಮರಗಳ ಮೇಲೆ ಬಿದ್ದು ಸುಮಾರು 35 ಅಡಿಕೆ ಮರಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment