ಕರಿಯಂಗಳ : ಬಸ್ ತಿರುಗಿಸುವ ಬಗ್ಗೆ ತಗಾದೆ ಎತ್ತಿ ಖಾಸಗಿ ಬಸ್ ಚಾಲಕ-ನಿರ್ವಾಹಕಗೆ ತಂಡದಿಂದ ಅವಾಚ್ಯ ನಿಂದನೆ, ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಕರಿಯಂಗಳ : ಬಸ್ ತಿರುಗಿಸುವ ಬಗ್ಗೆ ತಗಾದೆ ಎತ್ತಿ ಖಾಸಗಿ ಬಸ್ ಚಾಲಕ-ನಿರ್ವಾಹಕಗೆ ತಂಡದಿಂದ ಅವಾಚ್ಯ ನಿಂದನೆ, ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

23 April 2025

ಕರಿಯಂಗಳ : ಬಸ್ ತಿರುಗಿಸುವ ಬಗ್ಗೆ ತಗಾದೆ ಎತ್ತಿ ಖಾಸಗಿ ಬಸ್ ಚಾಲಕ-ನಿರ್ವಾಹಕಗೆ ತಂಡದಿಂದ ಅವಾಚ್ಯ ನಿಂದನೆ, ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ಬಸ್ ತಿರುಗಿಸುವ ವಿಚಾರದಲ್ಲಿ ತಗಾಗೆ ಎತ್ತಿ ತಂಡವೊಂದು ಖಾಸಗಿ ಬಸ್ಸನ್ನು ತಡೆದು ಚಾಲಕ-ನಿರ್ವಾಹಕರಿಗೆ ಅವಾಚ್ಯವಾಗಿ ಬೈದು ಜೀವಬೆದರಿಕೆ ಹಾಕಿದ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪ್ಪಾಡಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು-ಗುರುಪುರ-ಕೈಕಂಬ-ಪೊಳಲಿ ಮಾರ್ಗವಾಗಿ ಸಂಚರಿಸುವ ನೋಂದಣಿ ಸಂಖ್ಯೆ ಕೆಎ19 ಡಿ2359ಯ ಖಾಸಗಿ ಬಸ್ಸಿನ ನಿರ್ವಾಹಕ, ಕಿನ್ನಿಗೋಳಿ, ಮೆನ್ನಬೆಟ್ಟು ಗ್ರಾಮದ ಉಳ್ಳಂಜೆ ನಿವಾಸಿ ಅಭಿಜಿತ್ ಶೆಟ್ಟಿ ಹಾಗೂ ಬಸ್ ಚಾಲಕ ಶರತ್ ಶೆಟ್ಟಿ ಎಂಬವರಿಗೆ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ್, ಪ್ರಶಾಂತ್ ಹಾಗೂ ಇತರರ ತಂಡ ಸೇರಿಕೊಂಡು ಕರಿಯಂಗಳ-ಪಲ್ಲಿಪ್ಪಾಡಿ ಎಂಬಲ್ಲಿ ಬಸ್ ತಡೆದು ಅವಾಚ್ಯವಾಗಿ ಬೈದು, ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ. 

ಈ ಬಗ್ಗೆ ಬಸ್ ನಿರ್ವಾಹಕ ಅಭಿಜಿತ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಕಳೆದ 6 ವರ್ಷಗಳಿಂದ ಸದ್ರಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಶರತ್ ಶೆಟ್ಟಿ ಎಂಬವರು ಚಾಲಕರಾಗಿರುತ್ತಾರೆ. ಸದ್ರಿ ಬಸ್ಸು ಮಂಗಳೂರು-ಗುರುಪುರ-ಕೈಕಂಬ-ಪೆÇಳಲಿ ಮಾರ್ಗವಾಗಿ ಕೊಳ್ತಮಜಲುವಿಗೆ ಸಂಚರಿಸುತ್ತಿದ್ದು, ಸೋಮವಾರ ಪೆÇಳಲಿ ಮಾರ್ಗವಾಗಿ ಕೊಳ್ತಮಜಲುವಿಗೆ ಪ್ರಯಾಣಿಕರನ್ನು ಇಳಿಸಿಕೊಂಡು, ಹತ್ತಿಸಿಕೊಂಡು ಸಂಚರಿಸಿರುತ್ತಿರುವ ವೇಳೆ ರಾತ್ರಿ 7.40 ರ ಸುಮಾರಿಗೆ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿ ಆರೋಪಿಗಳು ಬಸ್ ತಿರುಗಿಸುವ ವಿಷಯದಲ್ಲಿ ತಕರಾರು ತೆಗೆದು ಏಕಾಏಕಿ ಬಸ್ಸನ್ನು ತಡೆದು ನಿಲ್ಲಿಸಿ, ಚಾಲಕ-ನಿರ್ವಾಹಕರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕರಿಯಂಗಳ : ಬಸ್ ತಿರುಗಿಸುವ ಬಗ್ಗೆ ತಗಾದೆ ಎತ್ತಿ ಖಾಸಗಿ ಬಸ್ ಚಾಲಕ-ನಿರ್ವಾಹಕಗೆ ತಂಡದಿಂದ ಅವಾಚ್ಯ ನಿಂದನೆ, ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top