ದೇಶ ಕಾಯುವ ಸೈನಿಕರಿಗೆ ಗೌರವ ಅರ್ಪಿಸಲು ಯುವ ಕಾಂಗ್ರೆಸ್ ನಡೆಸಿದ ಸಾಮಾಜಿಕ ಕಾರ್ಯ ಶ್ಲಾಘನೀಯ : ಸಲೀಂ ಅಹ್ಮದ್ - Karavali Times ದೇಶ ಕಾಯುವ ಸೈನಿಕರಿಗೆ ಗೌರವ ಅರ್ಪಿಸಲು ಯುವ ಕಾಂಗ್ರೆಸ್ ನಡೆಸಿದ ಸಾಮಾಜಿಕ ಕಾರ್ಯ ಶ್ಲಾಘನೀಯ : ಸಲೀಂ ಅಹ್ಮದ್ - Karavali Times

728x90

25 May 2025

ದೇಶ ಕಾಯುವ ಸೈನಿಕರಿಗೆ ಗೌರವ ಅರ್ಪಿಸಲು ಯುವ ಕಾಂಗ್ರೆಸ್ ನಡೆಸಿದ ಸಾಮಾಜಿಕ ಕಾರ್ಯ ಶ್ಲಾಘನೀಯ : ಸಲೀಂ ಅಹ್ಮದ್

 ಮಂಗಳೂರು, ಮೇ 25, 2025 (ಕರಾವಳಿ ಟೈಮ್ಸ್) : ತಮ್ಮ ಜೀವನವನ್ನೆ ತ್ಯಾಗ ಮಾಡಿ ದೇಶ ಕಾಯುವ ಸೈನಿಕರಿಗೆ ಶಕ್ತಿ ತುಂಬುವ ಸಲುವಾಗಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರದಂತಹ ಸಾಮಾಜಿಕ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ಮಾದರಿ ಕಾರ್ಯಕ್ರಮ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಶ್ಲಾಘಿಸಿದರು. 

ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಸಮಿತಿಯ ನೇತೃತ್ವದಲ್ಲಿ ಯನಪೆÇೀಯ ಆಸ್ಪತ್ರೆಯ ಸಹಯೋಗದೊಂದಿಗೆ ಅಪರೇಷನ್ ಸಿಂಧೂರದಲ್ಲಿ ಕಾರ್ಯಾಚರಣೆ ಮಾಡಿದ ಸೈನಿಕರಿಗೆ ಶಕ್ತಿ ತುಂಬುವ ಸಲುವಾಗಿ ಭಾನುವಾರ ಮಲ್ಲಿಕಟ್ಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಆಸ್ಪತ್ರೆಗಳಲ್ಲಿ ರಕ್ತ ಕೊರತೆ ಇರುವ ಈ ಸಂದರ್ಭದಲ್ಲಿ ರಕ್ತದಾನ ಶಿಬಿರ ಬಹಳ ಉಪಯುಕ್ತ ಕಾರ್ಯಕ್ರಮ. ಇದು ಪ್ರತೀ ತಾಲೂಕು ಮಟ್ಟದಲ್ಲಿ ಮುಂದುವರೆಸಿ ಎಂದು ಕರೆ ನೀಡಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ ರಮನಾಥ ರೈ, ಪ್ರಮುಖರಾದ ಪದ್ಮರಾಜ್ ಪೂಜಾರಿ, ಸುರೇಶ್ ಬಳ್ಳಾಲ್, ಮಂಜುನಾಥ ಮಣಿ ಚೆಟ್ಟಿ, ಶಿವಪ್ರಸಾದ್ ಪಾಣಾಜೆ, ಕೆ ಕೆ ಶಾಹುಲ್ ಹಮೀದ್, ಶಶಿದರ್ ಹೆಗ್ಡೆ, ಕೆ ಆಶ್ರಫ್, ನವೀನ್ ಡಿಸೋಜ, ಪ್ರಕಾಶ್ ಸಾಲ್ಯಾನ್, ವಿಕಾಶ್ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಗಿರೀಶ್ ಆಳ್ವ, ಶಬೀರ್ ಸಿದ್ದಕ್ಟಟೆ, ನಝೀರ್ ಬಜಾಲ್, ಅಶೋಕ್ ಪೂಜಾರ್ ಮುಲ್ಕಿ, ಸುನಿತ್ ಡೇಸಾ, ಬಶೀರ್ ಕಣ್ಣೂರು, ದೀಕ್ಷಿತ್ ಅತ್ತಾವರ, ಹಕೀಂ ಕೊಕ್ಕಡ, ಜಾಕ್ಸನ್ ಮೂಡಬಿದ್ರೆ, ಪೈಝಲ್ ಕಡಬ, ವೆಲ್ವಿನ್, ಪೃಥ್ವಿರಾಜ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ವಿಧಾನಸಭಾಧ್ಯಕ್ಷ ಆಸಿಪ್ ಬಜಾಲ್ ಸ್ವಾಗತಿಸಿ, ಶ್ರುತಿ ಪ್ರವೀನ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ದೇಶ ಕಾಯುವ ಸೈನಿಕರಿಗೆ ಗೌರವ ಅರ್ಪಿಸಲು ಯುವ ಕಾಂಗ್ರೆಸ್ ನಡೆಸಿದ ಸಾಮಾಜಿಕ ಕಾರ್ಯ ಶ್ಲಾಘನೀಯ : ಸಲೀಂ ಅಹ್ಮದ್ Rating: 5 Reviewed By: karavali Times
Scroll to Top