ಮತೀಯ ಪ್ರಕರಣ, ನೈತಿಕ ಪೊಲೀಸ್ ಗಿರಿ ಬಗ್ಗೆ ಗಂಭೀರ ಪರಿಗಣನೆ, ಸೋಶಿಯಲ್ ಮೀಡಿಯಾ ಸುಳ್ಳು ಸುದ್ದಿಗಳ ಬಗ್ಗೆಯೂ ನಿಗಾ : ದ.ಕ. ನೂತನ ಎಸ್ಪಿ ಡಾ ಅರುಣ್ ಅಧಿಕಾರ ಸ್ವೀಕಾರ - Karavali Times ಮತೀಯ ಪ್ರಕರಣ, ನೈತಿಕ ಪೊಲೀಸ್ ಗಿರಿ ಬಗ್ಗೆ ಗಂಭೀರ ಪರಿಗಣನೆ, ಸೋಶಿಯಲ್ ಮೀಡಿಯಾ ಸುಳ್ಳು ಸುದ್ದಿಗಳ ಬಗ್ಗೆಯೂ ನಿಗಾ : ದ.ಕ. ನೂತನ ಎಸ್ಪಿ ಡಾ ಅರುಣ್ ಅಧಿಕಾರ ಸ್ವೀಕಾರ - Karavali Times

728x90

30 May 2025

ಮತೀಯ ಪ್ರಕರಣ, ನೈತಿಕ ಪೊಲೀಸ್ ಗಿರಿ ಬಗ್ಗೆ ಗಂಭೀರ ಪರಿಗಣನೆ, ಸೋಶಿಯಲ್ ಮೀಡಿಯಾ ಸುಳ್ಳು ಸುದ್ದಿಗಳ ಬಗ್ಗೆಯೂ ನಿಗಾ : ದ.ಕ. ನೂತನ ಎಸ್ಪಿ ಡಾ ಅರುಣ್ ಅಧಿಕಾರ ಸ್ವೀಕಾರ

ಮಂಗಳೂರು, ಮೇ 30, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಡಾ ಅರುಣ್ ಕೆ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮನ ಎಸ್ಪಿ ಯತೀಶ್ ಅವರಿಂದ ಡಾ ಅರುಣ್ ಅವರು ಅಧಿಕಾರ ಹಸ್ತಾಂತರ ಪಡೆದುಕೊಂಡರು. 

ಈ ಸಂದರ್ಭ ಮಾತನಾಡಿದ ನೂತನ ಎಸ್ಪಿ ಡಾ ಅರುಣ್ ಕೆ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಜೊತೆಗೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಮತೀಯ ಪ್ರಕರಣ, ನೈತಿಕ ಪೆÇಲೀಸ್ ಗಿರಿ ಪ್ರಕರಣಗಳ ಬಗ್ಗೆಯೂ ಗಂಭೀರವಾಗಿ ಪರಿಗಣಿಸಲಾಗುವುದು. ಅದೇ ರೀತಿ ರೌಡಿ ಶೀಟರ್ ಗಳ ಚನವಲನಗಳ ಮೇಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಮೇಲೆ ನಿಗಾ ಇರಿಸಲಾಗುವುದು. ಅಕ್ರಮ ಗಣಿಗಾರಿಕೆ, ಗ್ಯಾಂಬ್ಲಿಂಗ್, ಬೆಟ್ಟಿಂಗ್ ಹಾಗೂ ಇನ್ನಿತರ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಕ್ರಮ ಗೋಹತ್ಯೆ/ಸಾಗಾಟ, ಮಾದಕ ಪದಾರ್ಥಗಳ ಸಾಗಾಟ/ ಮಾರಾಟ/ ಸೇವನೆ, ಅಕ್ರಮ ಗಣಿಗಾರಿಕೆ, ಗ್ಯಾಂಬ್ಲಿಂಗ್, ಬೆಟ್ಟಿಂಗ್ ಹಾಗೂ ಇನ್ನಿತರ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಡಾ ಅರುಣ್ ಅವರು, ಜಿಲ್ಲೆಯ ಸೂಕ್ಷ್ಮ ವಿಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಮಾಹಿತಿಗಳಿದ್ದಲ್ಲಿ ಜನ ನೇರವಾಗಿ ಮುಕ್ತವಾಗಿ ಮೊಬೈಲ್ ಸಂಖ್ಯೆ 9480805301 ಅಥವಾ ಕಛೇರಿ ಸಂಖ್ಯೆ 0824-2220503ಗೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮತೀಯ ಪ್ರಕರಣ, ನೈತಿಕ ಪೊಲೀಸ್ ಗಿರಿ ಬಗ್ಗೆ ಗಂಭೀರ ಪರಿಗಣನೆ, ಸೋಶಿಯಲ್ ಮೀಡಿಯಾ ಸುಳ್ಳು ಸುದ್ದಿಗಳ ಬಗ್ಗೆಯೂ ನಿಗಾ : ದ.ಕ. ನೂತನ ಎಸ್ಪಿ ಡಾ ಅರುಣ್ ಅಧಿಕಾರ ಸ್ವೀಕಾರ Rating: 5 Reviewed By: karavali Times
Scroll to Top