ಬ್ರಹ್ಮರಕೂಟ್ಲು ಹೆದ್ದಾರಿ ಬದಿ ಬಾಯಿ ಬಿಟ್ಟಿರುವ ಮರಣ ಗುಂಡಿ : ಆತಂಕದಲ್ಲಿ ವಾಹನ ಸವಾರರು, ಪಾದಚಾರಿಗಳು - Karavali Times ಬ್ರಹ್ಮರಕೂಟ್ಲು ಹೆದ್ದಾರಿ ಬದಿ ಬಾಯಿ ಬಿಟ್ಟಿರುವ ಮರಣ ಗುಂಡಿ : ಆತಂಕದಲ್ಲಿ ವಾಹನ ಸವಾರರು, ಪಾದಚಾರಿಗಳು - Karavali Times

728x90

25 May 2025

ಬ್ರಹ್ಮರಕೂಟ್ಲು ಹೆದ್ದಾರಿ ಬದಿ ಬಾಯಿ ಬಿಟ್ಟಿರುವ ಮರಣ ಗುಂಡಿ : ಆತಂಕದಲ್ಲಿ ವಾಹನ ಸವಾರರು, ಪಾದಚಾರಿಗಳು

ಬಂಟ್ವಾಳ, ಮೇ 25, 2025 (ಕರಾವಳಿ ಟೈಮ್ಸ್) : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಗ್ರಾಮದ ಬ್ರಹ್ಮರಕೂಟ್ಲು ಎಂಬಲ್ಲಿ ಬಂಟರ ಭವನದ ಬಳಿ ಇರುವ ಕಿರು ಸೇತುವೆ ಬದಿಯ ಸ್ಲ್ಯಾಬ್ ಮುರಿದು ಬಿದ್ದು ಅಪಾಯಕಾರಿ ಹೊಂಡ ನಿರ್ಮಾಣಗೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳ ಪಾಲಿಗೆ ಅಪಾಯದ ಕರೆ ಗಂಟೆ ಭಾರಿಸುತ್ತಿದೆ. 

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೇತುವೆ ಮೇಲ್ಭಾಗದಲ್ಲಿ ಹರಿಯುತ್ತಿರುವ ಮಳೆ ನೀರಿನ ರಭಸಕ್ಕೆ ಸೇತುವೆ ಬದಿಯ ಪಾದಚಾರಿ ನಡೆದಾಡುವ ಜಾಗದ ಕಾಂಕ್ರಿಟ್ ಸ್ಲ್ಯಾಬ್ ಮುರಿದು ಕೆಳಕ್ಕೆ ಬಿದ್ದು ಈ ಹೊಂಡ ನಿರ್ಮಾಣಗೊಂಡಿದೆ. 

ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ನಡೆದಾಡುವ ಪಾದಚಾರಿಗಳ ಪಾಲಿಗೆ ಭಾರೀ ಅಪಾಯದ ಆತಂಕ ಎದುರಾಗಿದೆ. ವಾಹನ ಸವಾರರು ಹಾಗೂ ಪಾದಚಾರಿಗಳು ಒಂದಷ್ಟು ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂದಪಟ್ಟ ಇಲಾಖೆ ಹಾಗೂ ಈ ಭಾಗದ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳುವಂತೆ ಇಲ್ಲಿನ ಜನ ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬ್ರಹ್ಮರಕೂಟ್ಲು ಹೆದ್ದಾರಿ ಬದಿ ಬಾಯಿ ಬಿಟ್ಟಿರುವ ಮರಣ ಗುಂಡಿ : ಆತಂಕದಲ್ಲಿ ವಾಹನ ಸವಾರರು, ಪಾದಚಾರಿಗಳು Rating: 5 Reviewed By: karavali Times
Scroll to Top