ಬಂಟ್ವಾಳ, ಮೇ 31, 2025 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರು ಗ್ರಾಮದ ಆರ್ಕಳಿಕೆ ನಿವಾಸಿ ಪೈರೋಜ ಬಾನು ಕೋಂ ಮಹಮ್ಮದ್ ರಫೀಕ್ ಅವರ ಫಾರಂ ಮೇಲೆ ಬರೆ ಜರಿದು ಸುಮಾರು 250 ಕೋಳಿಗಳು ಮೃತಪಟ್ಟ ಘಟನೆ ಸಂಭವಿಸಿದೆ.
ಬಳಿಯೂರು ಗ್ರಾಮದ ಕರುವೇಲು ಎಂಬಲ್ಲಿ ಮಳೆಯಿಂದ ಹಾನಿಗೆ ಒಳಗಾಗಿರುವ ಮನೆಗಳಿಗೆ ಹಾಗೂ ಅಪಾಯದಂಚಿನಲ್ಲಿರುವ ಪ್ರದೇಶಗಳಿಗೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಪೆರ್ನೆ ಕ್ವಾಟ್ರಸ್ ಎಂಬಲ್ಲಿನ ಹಳೆ ಹೆದ್ದಾರಿ ಸಮೀಪ ಚರಂಡಿ ದುರಸ್ತಿ ಇಲ್ಲದೆ ಇರುವುದರಿಂದ ರಸ್ತೆಯನ್ನು ಮಳೆ ನೀರು ಆವರಿಸಿದ್ದು, ಇಲ್ಲಿನ ಕುಟುಂಬಗಳನ್ನು ಮಳೆಗಾಲ ಮುಗಿಯುವವರೆಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಗ್ಗ ಎಂಬಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿರುವ 2 ಮನೆಗಳನ್ನು ಕೆಡವಲು ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಕಚೇರಿಯ ಮಾಹಿತಿ ತಿಳಿಸಿದೆ.
0 comments:
Post a Comment