ಬಂಟ್ವಾಳ, ಮೇ 31, 2025 (ಕರಾವಳಿ ಟೈಮ್ಸ್) : ಬೈಕಿನಲ್ಲಿ ತೆರಳುತ್ತಿದ್ದ ಧಾರ್ಮಿಕ ಗುರುವೊಬ್ಬರಿಗೆ ರಸ್ತೆಯಲ್ಲಿ ಹಿಂದಿನಿಂದ ವ್ಯಕ್ತಿಯೊಬ್ಬ ಕಲ್ಲು ಎಸೆದು ದಾಳಿಗೆ ಯತ್ನಿಸಿದ ಘಟನೆ ನಡೆದಿರುವ ಬಗ್ಗೆ ಬಡಗಬೆಳ್ಳೂರು ನಿವಾಸಿಯೋರ್ವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
ಬಡಗಬೆಳ್ಳೂರು ನಿವಾಸಿ ಶಮೀರ್ ಎಂಬವರು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಕಳೆದ ಡಿಸೆಂಬರ್ 29 ರಂದು ಮದ್ಯಾಹ್ನ ಸಮಯ ಉಪ್ಪಿನಂಗಡಿಯ ಸಿನಾನ್ ಪೈಝಿ ಎಂಬವರು ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿ ಧಾರ್ಮಿಕ ಆಚರಣೆ ಮುಗಿಸಿ, ಮಧ್ಯಾಹ್ನ ಸಮಯ ಅವರ ಬೈಕಿನಲ್ಲಿ ಉಪ್ಪಿನಂಗಡಿಗೆ ಹೋಗಲೆಂದು ತೆರಳುತ್ತಿರುವಾಗ, ಆರೋಪಿ ತೇಜಾಕ್ಷ ಎಂಬಾತನು ಹಿಂದಿನಿಂದ ಬಲವಾಗಿ ಕಲ್ಲು ಬಿಸಾಡಿದ್ದಾನೆ. ಆದರೆ ಆರೋಪಿ ಎಸೆದ ಕಲ್ಲಿನಿಂದ ಸಿನಾನ್ ಪೈಝಿ ತಪ್ಪಿಸಿಕೊಂಡಿರುತ್ತಾರೆ. ಆರೋಪಿಯ ಬಗ್ಗೆ ಭಯಗೊಂಡಿದ್ದ ದೂರುದಾರ ಶಮೀರ್ ಹಾಗೂ ಸಿನಾನ್ ಪೈಝಿ ಅವರು ಸುಮ್ಮನಿದ್ದರು. ಈ ಬಗ್ಗೆ ಶನಿವಾರ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಆರೋಪಿ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment