ಬಂಟ್ವಾಳ, ಜೂನ್ 30, 2025 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಅಟಲ್ ಟಿಂಕರಿಂಗ್ ಲ್ಯಾಬಿನ ಎನರ್ಜಿ ಕ್ಲಬ್ ಇದರ ಅನ್ ಲೈನ್ ಕಾರ್ಯಕ್ರಮವು ಬಂಟ್ವಾಳ-ವಿದ್ಯಾಗಿರಿಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಶ್ವ ಜಾಗತಿಕ ತಾಪಮಾನ ಹೆಚ್ಚಳ ಅದರ ಕಾರಣ ಮತ್ತು ಪರಿಣಾಮಗಳು, ಪರಿಸರ ಮಾಲಿನ್ಯದ ಕಾರಣ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು. ಎನರ್ಜಿ ಕಬ್ಬಿನ ಕ್ಲಬ್ ನಿರ್ದೇಶಕಿ ಕುಮಾರಿ ರಶ್ಮಿತಾ ಅವರ ನೇತೃತ್ವದಲ್ಲಿ ಮೂವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ವಿಜ್ಞಾನ ವಿಷಯದ ಶಿಕ್ಷಕಿಯರಾದ ಶ್ರೀಮತಿ ಭವ್ಯ ಜೆ ಹಾಗೂ ಕುಮಾರಿ ಸೌಜನ್ಯ ಉಪಸ್ಥಿತರಿದ್ದರು.
0 comments:
Post a Comment