ಬಂಟ್ವಾಳ, ಜೂನ್ 06, 2025 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ರಸ್ತೆಗೆ ಮಗುಚಿ ಬಿದ್ದು ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ವೈದ್ಯೆ, ಸಿಬ್ಬಂದಿಗಳು ಹಾಗೂ ಅಟೋ ಚಾಲಕ ಗಾಯಗೊಂಡ ಘಟನೆ ಬಿ ಕಸಬಾ ಗ್ರಾಮದ ಅಜೆಕಲ ಎಂಬಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಗಾಯಾಳುಗಳನ್ನು ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ವೈದ್ಯೆ ಡಾ ಫಾತಿಮಾ, ಸಿಬ್ಬಂದಿಗಳಾದ ಯಶೋಧ ಹಾಗೂ ಸುಜಾತ, ಅಟೋ ಚಾಲಕ ಮಹಮ್ಮದ್ ಎಂದು ಹೆಸರಿಸಲಾಗಿದೆ.
ಇವರು ಅಟೋ ರಿಕ್ಷಾದಲ್ಲಿ ಕೆಂಪುಗುಡ್ಡೆಯಿಂದ ಗೂಡಿನಬಳಿಯಲ್ಲಿರುವ ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ತೆರಳುತ್ತಿದ್ದ ವೇಳೆ ಮಧ್ಯಾಹ್ನ 1.30ರ ಸುಮಾರಿಗೆ ಅಜೆಕಲ ಕ್ರಾಸ್ ತಲುಪಿ ಕಡೂರು-ಬಿ ಸಿ ರೋಡು ಹೆದ್ದಾರಿಯಲ್ಲಿ ಅಟೋ ಚಾಲಕ ರಿಕ್ಷಾವನ್ನು ತಿರುಗಿಸುತ್ತಿರುವ ಸಂದರ್ಭ ಬೆಳ್ತಂಗಡಿ ಕಡೆಯಿಂದ ಬಂದ ಸ್ವಿಫ್ಟ್ ಕಾರು ಚಾಲಕ ಕಾರನ್ನು ನಿಧಾನಿಸಿದ್ದು, ಅದೇ ವೇಳೆ ಬೆಳ್ತಂಗಡಿ ಕಡೆಯಿಂದ ಬಿ ಸಿ ರೋಡು ಕಡೆ ಚಲಾಯಿಸಿಕೊಂಡು ಬಂದ ಡಸ್ಟರ್ ಕಾರು ಚಾಲಕ ದುಡುಕುತನದಿಂದ ಚಲಾಯಿಸಿ ಸ್ವಿಫ್ಟ್ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಸ್ವಿಫ್ಟ್ ಕಾರು ಮುಂದಕ್ಕೆ ಚಲಿಸಿ ಅಟೋ ರಿಕ್ಷಾಕ್ಕೆ ತಾಗಿ ರಿಕ್ಷಾ ರಸ್ತೆಗೆ ಮಗುಚಿ ಬಿದ್ದು ಚಾಲಕ ಸಹಿತ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಾಳುಗಳು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಯಶೋಧ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment