ಬಂಟ್ವಾಳ, ಜೂನ್ 05, 2025 (ಕರಾವಳಿ ಟೈಮ್ಸ್) : ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಮಾಯಕ ಅಬ್ದುಲ್ ರಹಿಮಾನ್ ಮನೆಗೆ ಭಾರತ ಕಮ್ಯೂನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ನಿಯೋಗ ಭೇಟಿ ನೀಡಿ ಮೃತರ ತಂದೆ ಮತ್ತು ಸಹೋದರ ಜೊತೆಗೆ ಮಾತನಾಡಿ ಸಾಂತ್ವನ ಹೇಳಲಾಯಿತು.
ಈ ಸಂದರ್ಭ ಅವರು ತಮ್ಮ ಮಗನನ್ನು ನಾವು ಕಳೆದುಕೊಂಡೆವು. ಆದರೆ ಇಂತಹ ಘಟನೆಗಳು ಮತ್ತೆ ಮರುಕಳಿಸದಿರಲಿ. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಹಿಂದಿನಂತೆ ಸೌಹಾರ್ದಯುತವಾಗಿ ಬದುಕುವಂತಾಬೇಕು ಎಂದು ತಮ್ಮ ಬಯಕೆ ತೋಡಿಕೊಂಡರು. ಅವರಿಗೆ ನ್ಯಾಯ ದೊರಕಿಸುವಲ್ಲಿ ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಭರವಸೆ ನೀಡಲಾಯಿತು.
ಭೇಟಿ ವೇಳೆ ಸಮಾನ ಮನಸ್ಕ ಸಂಘಟನೆಯ ಬಂಟ್ವಾಳ ತಾಲೂಕು ಸಮಿತಿಯ ಪ್ರಮುಖರು ಕೂಡಾ ಜೊತೆಗಿದ್ದರು. ನಿಯೋಗದಲ್ಲಿ ಸಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಮಾಜಿ ಜಿಲ್ಲಾ ಕಾರ್ಯದರ್ಶಿ ವಿ ಕುಕ್ಯಾನ್, ಸಹಕಾರ್ಯದರ್ಶಿಗಳಾದ ಸೀತಾರಾಮ ಬೇರಿಂಜ, ಸುರೇಶ್ ಕುಮಾರ್, ಮಂಗಳೂರು ತಾಲೂಕು ಕಾರ್ಯದರ್ಶಿ ಎಂ ಕರುಣಾಕರ, ಬಂಟ್ವಾಳ ತಾಲೂಕು ಸಹ ಕಾರ್ಯದರ್ಶಿ ಭಾರತಿ ಪ್ರಶಾಂತ್, ಹಿರಿಯ ಮುಂದಾಳು ಬಿ ಬಾಬು ಭಂಡಾರಿ, ಜಗತ್ ಪಾಲ್ ಕೋಡಿಕಲ್, ಸಮಾನ ಮನಸ್ಕ ಸಂಘಟನೆ ಬಂಟ್ವಾಳ ತಾಲೂಕು ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು, ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಪ್ರಮುಖರಾದ ಕೇಶವ ಪೂಜಾರಿ ಪಂಜಿಕಲ್ಲು, ಮೋಹನ ಅರಳ, ಸತೀಶ್ ಕುಮಾರ್, ಮ್ಯಾಕ್ಸಿಂ ಡಿ ಸೋಜಾ, ಅಬ್ದುಲ್ ಕರೀಂ ಇದ್ದರು.
0 comments:
Post a Comment