ಮಂಗಳೂರು, ಜೂನ್ 03, 2025 (ಕರಾವಳಿ ಟೈಮ್ಸ್) : ಬಕ್ರಿದ್ ಹಬ್ಬದ ಪ್ರಯುಕ್ತ ಬಟ್ಟೆ ಖರೀದಿಗೆಂದು ಪೇಟೆಗೆ ಬಂದಿದ್ದ ತಾಯಿ ಮಕ್ಕಳು ಮಳೆಗೆ ಬೇಕರಿ ಎದುರುಗಡೆ ನಿಂತಿದ್ದ ವೇಳೆ ಬುರ್ಖಾಧಾರಿ ಹೆಂಗಸರೊಬ್ಬರು ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಎಗರಿಸಿದ ಘಟನೆ ತೊಕ್ಕೊಟ್ಟು ಸಾಗರ್ ಕಲೆಕ್ಷನ್ ಬಳಿ ಸೋಮವಾರ ಸಂಭವಿಸಿದೆ.
ಶ್ರೀಮತಿ ರಹಮತ್ ಅವರು ಸೋಮವಾರ ಸಂಜೆ ಬಕ್ರಿದ್ ಹಬ್ಬದ ಹಿನ್ನಲೆಯಲ್ಲಿ ಮಕ್ಕಳಿಗೆ ಬಟ್ಟೆ ಖರೀದಿ ಮಾಡಲು ತನ್ನ ಮಕ್ಕಳಾದ ಆಯಿಷ ನೂಹ ಮತ್ತು ಫಾತಿಮ ನೀಹಾ ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಸ್ಸಿನಲ್ಲಿ ಪ್ರಯಾಣಿಸಿ ತೊಕ್ಕೊಟಿನಲ್ಲಿ ಬಸ್ಸಿನಿಂದ ಇಳಿದು ಪೆರ್ಮನ್ನೂರು ಗ್ರಾಮದ ತೊಕ್ಕೊಟು ಸಾಗರ್ ಕಲೆಕ್ಷನ್ ಅಂಗಡಿಗೆ ಅಪರಾಹ್ನ 3 ಗಂಟೆಗೆ ನಡೆದುಕೊಂಡು ಹೋಗುತ್ತಿರುವಾಗ ಜೋರಾಗಿ ಮಳೆ ಬಂದ ಕಾರಣ ರಹಮತ್ ತನ್ನ ಮಕ್ಕಳಿಬ್ಬರ ಜೊತೆಯಲ್ಲಿ ಸಾಗರ್ ಕಲೆಕ್ಷನ್ ಅಂಗಡಿಯ ಬಳಿ ಇರುವ ಬೇಕರಿಯ ಎದುರು ನಿಂತುಕೊಂಡಿದ್ದು, ಸುಮಾರು 2 ನಿಮಿಷದಲ್ಲಿಯೇ ಮಗಳು ಫಾತಿಮ ನೀಹಾಳು ಜೋರಾಗಿ ಕಿರುಚಿಕೊಂಡಾಗ ಆಕೆಯನ್ನು ಎತ್ತಿಕೊಂಡು ನೋಡುವಾಗ ಮಗಳ ಕುತ್ತಿಗೆಯಲ್ಲಿ ಧರಿಸಿದ್ದ ಚಿನ್ನ ಕಾಣಿಸದೇ ಇದ್ದಾಗ ಅಲ್ಲಿಯೇ ಹುಡುಕಿದ್ದು ಸಿಗದೇ ಇದ್ದು ಬಳಿಕ ಮಗಳು ಫಾತಿಮ ನೀಹಾಳಲ್ಲಿ ಚಿನ್ನದ ಚೈನ್ ಎಲ್ಲಿದೆ ಎಂದು ಕೇಳಿದಾಗ ಅಲ್ಲಿಯೇ ಇದ್ದ ಬುರ್ಖ ಧರಿಸಿದ್ದ ಹೆಂಗಸು ಚೈನನ್ನು ತೆಗೆದರು ಎಂದು ಹೇಳಿದ್ದಾಳೆ. ಕಳವಾಗಿರುವ ಚಿನ್ನದ ಚೈನ್ ಸುಮಾರು 10 ಗ್ರಾಂ ತೂಕವಿದ್ದು, ಅದರಲ್ಲಿ ಚಿನ್ನದ ಪೆಂಡೆಂಟ್ ಅಳವಡಿಸಿರುವುದಾಗಿ ಅಂದಾಜು ಮೌಲ್ಯ 70 ಸಾವಿರ ಆಗಬಹುದು ಎಂದು ರಹಮತ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment