ಮಂಗಳೂರು, ಜೂನ್ 03, 2025 (ಕರಾವಳಿ ಟೈಮ್ಸ್) : ಬಜ್ಪೆ ಸಮೀಪದ ಕೆಂಜಾರು ಗ್ರಾಮದ ಪೋರ್ಕೋಡಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ವೇಳೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಸಾರ್ವಜನಿಕವಾಗಿ ತಳವಾರು ಝಳಪಿಸುತ್ತಾ ಹೋದ ಪ್ರಕರಣವನ್ನು ಸೀಸಿ ಟಿವಿ ಫೂಟೇಜ್ ಆಧರಿಸಿ ಪ್ರಕರಣ ಬೇಧಿಸಿರುವ ಬಜ್ಪೆ ಪೊಲೀಸರು ಮೂವರು ಯುವಕರನ್ನು ಪತ್ತೆ ಹಚ್ಚಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ಅಶ್ವಥ್, ರವಿಶಂಕರ್ ಹಾಗೂ ಸಮರ್ಥ ಎಂದು ಹೆಸರಿಸಲಾಗಿದೆ. ಕೆಂಜಾರು ಗ್ರಾಮದ ಪೆÇೀರ್ಕೊಡಿ ಅಂಬೆಡ್ಕರ್ ನಗರ ಎಂಬಲ್ಲಿ ಜೂನ್ 1 ರಂದು ಮಧ್ಯಾಹ್ನ ಸುಮಾರು 12-45ರ ವೇಳೆಗೆ ಕೇಸರಿ ಬಣ್ಣದ ಸ್ಕೂಟರಿನಲ್ಲಿ ಮೂರು ಮಂದಿ ಯುವಕರು ಹೋಗುತ್ತಿದ್ದು, ಅದರಲ್ಲಿ ಮಧ್ಯದಲ್ಲಿ ಕುಳಿತವ ಕೈಯಲ್ಲಿ ಮಾರಕಾಯುಧ ಹಿಡಿದುಕೊಂಡು ಅದನ್ನು ಸಾರ್ವಜನಿಕವಾಗಿ ಝಳಪಿಸುತ್ತಾ ಸಾರ್ವಜನಿಕರಿಗೆ ಭಯ ಉಂಟಾಗುವ ರೀತಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ವೀಡಿಯೋ ತುಣುಕೊಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವೈರಲ್ ಆಗಿರುವ ಹಿನ್ನಲೆಯಲ್ಲಿ ಮಾಹಿತಿ ಪಡೆದ ಬಜ್ಪೆ ಪೊಲೀಸರು ಅಂಬೆಡ್ಕರ್ ನಗರದ ಬದ್ರಿಯಾ ಜುಮ್ಮಾ ಮಸೀದಿಗೆ ತೆರಳಿ ಮಸೀದಿಯ ಅದ್ಯಕ್ಷರು ಮತ್ತು ಇತರರ ಸಮಕ್ಷಮ ಮಸೀದಿಗೆ ಅಳವಡಿಸಿದ್ದ ಸೀಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಈ ಸಂದರ್ಭ ಜೂನ್ 1 ರಂದು ಮದ್ಯಾಹ್ನ ಸುಮಾರು 12-45 ಗಂಟೆಗೆ ಕೇಸರಿ ಬಣ್ಣದ ಸ್ಕೂಟರಿನಲ್ಲಿ 3 ಜನ ಯುವಕರು ಹೋಗುತ್ತಿರುವುದು ಅವರ ಪೈಕಿ ಮದ್ಯದಲ್ಲಿ ಕುಳಿತ ಯುವಕನ ಕೈಯಲ್ಲಿ ಮಾರಕ ಆಯುಧ ಇರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ತನಿಖೆ ನಡೆಸಿದಾಗ ಸದ್ರಿ ಸ್ಕೂಟರಿನಲ್ಲಿ ಮಾರಕ ಆಯುಧವನ್ನು ಹಿಡಿದುಕೊಂಡು ಅದನ್ನು ಸಾರ್ವಜನಿಕರಿಗೆ ತೋರಿಸಿ ಭಯ ಉಂಟಾಗುವ ರೀತಿಯಲ್ಲಿ ಝಳಪಿಸುತ್ತಿದ್ದು, ಸದ್ರಿ ಯುವಕರ ಪೈಕಿ ಸ್ಕೂಟರ್ ಚಲಾಯಿಸುತ್ತಿದ್ದವನು ಅಶ್ವಥ್ ಎಂಬುವುದಾಗಿ, ಹಿಂಬದಿ ಕುಳಿತಿದ್ದ ಯುವಕ ರವಿಶಂಕರ್ ಹಾಗೂ ಮದ್ಯದಲ್ಲಿ ಮಾರಕಾಯುಧ ಹಿಡಿದುಕೊಂಡು ಕುಳಿತಿದ್ದ ಯುವಕ ಸಮರ್ಥ ಎಂಬುವುದಾಗಿ ತಿಳಿದು ಬಂದಿದ್ದು, ಸ್ಕೂಟರ್ ನೋಂದಣಿ ಸಂಖ್ಯೆ ಕೆಎ70 ಎಚ್0839 ಎಂಬುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇತ್ತಿಚಿಗೆ ಮಂಗಳೂರು ನಗರದ ವ್ಯಾಪ್ತಿಯಲ್ಲಿ ಕೆಲವೊಂದು ಅಹಿತಕರ ಘಟನೆಗಳು ನಡೆದು ಪರಿಸರದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಯಾಗಿದ್ದು, ಇಂತಹ ಸನ್ನಿವೇಶದಲ್ಲಿ ಕೆಂಜಾರು ಗ್ರಾಮದ ಪೆÇರ್ಕೋಡಿ ಅಂಬೆಡ್ಕರ್ ನಗರದ ಪುನರ್ವಸತಿ ಕಾಲೋ£ಯ ನಿವಾಸಿಗಳಾದ ಅಶ್ವಥ್, ಸಮರ್ಥ್ ಮತ್ತು ರವಿಶಂಕರ್ ಎಂಬವರು ಕೈಯಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದೆ ಮಾರಕಾಯುಧವನ್ನು ಹಿಡಿದುಕೊಂಡು ಸ್ಕೂಟರಿನಲ್ಲಿ ಹೋಗಿ ಸಾರ್ವಜನಿಕರಿಗೆ ಮಾರಕಾಯುಧ ತೋರಿಸಿ ಭಯ ಉಂಟಾಗುವ ರೀತಿಯಲ್ಲಿ ಝಳಪಿಸಿ ಯಾವುದೋ ದುಷ್ಕ್ರತ್ಯವನ್ನು ನಡೆಸುವ ಉದ್ದೇಶದಿಂದ ತಿರುಗಾಡಿಕೊಂಡಿರುವುದರಿಂದ ಯುವಕರ ವಿರುದ್ದ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment