ಕೊಲೆ, ಅಕ್ರಮ ಸಂಪತ್ತು ಸಂಗ್ರಹ, ಮಹಿಳೆಯರಿಗೆ ಅಗೌರವ ಮೊದಲಾದ ದುಷ್ಕøತ್ಯದಲ್ಲಿ ತೊಡಗಿಸದೆ ಸಹಬಾಳ್ವೆಯ ಬದುಕು ಕಟ್ಟಿಕೊಳ್ಳಿ : ಮಾವಿನಕಟ್ಟೆ ಕೇಂದ್ರ ಮಸೀದಿಯಲ್ಲಿ ಈದುಲ್ ಅಝ್‍ಹಾ ಸಂಭ್ರಮ - Karavali Times ಕೊಲೆ, ಅಕ್ರಮ ಸಂಪತ್ತು ಸಂಗ್ರಹ, ಮಹಿಳೆಯರಿಗೆ ಅಗೌರವ ಮೊದಲಾದ ದುಷ್ಕøತ್ಯದಲ್ಲಿ ತೊಡಗಿಸದೆ ಸಹಬಾಳ್ವೆಯ ಬದುಕು ಕಟ್ಟಿಕೊಳ್ಳಿ : ಮಾವಿನಕಟ್ಟೆ ಕೇಂದ್ರ ಮಸೀದಿಯಲ್ಲಿ ಈದುಲ್ ಅಝ್‍ಹಾ ಸಂಭ್ರಮ - Karavali Times

728x90

6 June 2025

ಕೊಲೆ, ಅಕ್ರಮ ಸಂಪತ್ತು ಸಂಗ್ರಹ, ಮಹಿಳೆಯರಿಗೆ ಅಗೌರವ ಮೊದಲಾದ ದುಷ್ಕøತ್ಯದಲ್ಲಿ ತೊಡಗಿಸದೆ ಸಹಬಾಳ್ವೆಯ ಬದುಕು ಕಟ್ಟಿಕೊಳ್ಳಿ : ಮಾವಿನಕಟ್ಟೆ ಕೇಂದ್ರ ಮಸೀದಿಯಲ್ಲಿ ಈದುಲ್ ಅಝ್‍ಹಾ ಸಂಭ್ರಮ

ಬಂಟ್ವಾಳ, ಜೂನ್ 07, 2025 (ಕರಾವಳಿ ಟೈಮ್ಸ್) : ವಾಮದಪದವು ಸಮೀಪದ ಮಾವಿನಕಟ್ಟೆ ಬದ್ರಿಯ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಮಸೀದಿ ಖತೀಬ್ ಅಬ್ದುಲ್ ನಾಸಿರ್ ಅಹ್ಸನಿ ನಂದಾವರ ಈದ್ ಪ್ರಾರ್ಥನೆ ಹಾಗೂ ಖುತುಬಾ ಪಾರಾಯಣಕ್ಕೆ ನೇತೃತ್ವ ವಹಿಸಿದ್ದರು. ಬಳಿಕ ಸಂದೇಶ ನೀಡಿದ ಅವರು, ನೀವಿರುವ ಈ ಮಣ್ಣು, ದಿನ, ನಾಡಿಗೆ ಪವಿತ್ರತೆ ಇರುವಂತೆ ಮನುಷ್ಯ ಶರೀರಕ್ಕೂ ಪವಿತ್ರತೆ ಇದೆ. ಪರಸ್ಪರ ಕೊಲೆ ಮಾಡುವುದೋ, ಇತರರ ಸಂಪತ್ತು ಅಕ್ರಮವಾಗಿ ದೋಚುವುದೋ, ಮಹಿಳೆಯರನ್ನು ಅಗೌರವದಿಂದ ಕಾಣುವುದೊ, ಅನೈತಿಕ ಸಂಭಂಧವಿರಿಸುವುದೋ, ಬಡ್ಡಿ ತಿನ್ನುವುದೊ ಮಾಡದಿರಿ.

ಪರಸ್ಪರ ಮೇಲು-ಕೀಳು ಭಾವವಿಲ್ಲದೆ ಸಮಾನವಾಗಿ ಎಲ್ಲರನ್ನೂ ಸ್ವೀಕರಿಸಿ ಸಹಬಾಳ್ವೆಯಿಂದ ಸುಂದರ ಬದುಕನ್ನು ಕಟ್ಟಿಕೊಳ್ಳಿ. ಜಗತ್ತಿನ ಯಾವ ಮೂಲೆಗೂ ಯಾವ ಸಂದರ್ಭದಲ್ಲೂ ಅನ್ವಯಿಸಿಕೊಳ್ಳುವ ಸುಂದರವಾದ ತತ್ವವಿದು ಎಂದರು. 

ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್ ಎಲ್ಪೇಲ್, ಕಾರ್ಯದರ್ಶಿ ಪುತ್ತುಮೋನು ನಡೈ, ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಅಲ್ ಬದ್ರಿಯ ಮಸ್ಜಿದ್ ಆದ್ಯಕ್ಷ ಹಂಝ ಬಸ್ತಿಕೋಡಿ, ಇಮಾಮ್ ಎಂ ಎಸ್ ಅಬೂಬಕ್ಕರ್ ಸಿದ್ದೀಕ್ ಹಮ್ದಾನಿ, ಮದ್ರಸ ಮುಖ್ಯ ಶಿಕ್ಷಕ ಅಶ್ಫಾಕ್ ಹಿಮಮಿ, ಆಲದಪದವು ಮಸೀದಿ ಕಾರ್ಯದರ್ಶಿ ಫಾರೂಕ್ ಬಸ್ತಿಕೋಡಿ ಹಾಗೂ ಜಮಾಅತ್ ಬಾಂಧವರು ಭಾಗವಹಿಸಿ ಪರಸ್ಪರ ಶುಭಾಶಯ ಹಂಚಿಕೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ಕೊಲೆ, ಅಕ್ರಮ ಸಂಪತ್ತು ಸಂಗ್ರಹ, ಮಹಿಳೆಯರಿಗೆ ಅಗೌರವ ಮೊದಲಾದ ದುಷ್ಕøತ್ಯದಲ್ಲಿ ತೊಡಗಿಸದೆ ಸಹಬಾಳ್ವೆಯ ಬದುಕು ಕಟ್ಟಿಕೊಳ್ಳಿ : ಮಾವಿನಕಟ್ಟೆ ಕೇಂದ್ರ ಮಸೀದಿಯಲ್ಲಿ ಈದುಲ್ ಅಝ್‍ಹಾ ಸಂಭ್ರಮ Rating: 5 Reviewed By: karavali Times
Scroll to Top